Home » ಪ್ರತಿಭಟನೆಗೆ ಬಂದ ಬಿಜೆಪಿ ಶಾಸಕನಿಗೆ ಮೊಟ್ಟೆಯಲ್ಲಿ ಹೊಡೆದು ಕಳುಹಿಸಿದ ಕಾಂಗ್ರೆಸ್ ಕಾರ್ಯಕರ್ತರು!!

ಪ್ರತಿಭಟನೆಗೆ ಬಂದ ಬಿಜೆಪಿ ಶಾಸಕನಿಗೆ ಮೊಟ್ಟೆಯಲ್ಲಿ ಹೊಡೆದು ಕಳುಹಿಸಿದ ಕಾಂಗ್ರೆಸ್ ಕಾರ್ಯಕರ್ತರು!!

0 comments

ರಾಜಧಾನಿಯ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಬಳಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿ, ಮೊಟ್ಟೆಯಲ್ಲಿ ಪಡೆದು ಕಳುಹಿಸಿರುವ ಘಟನೆ ನಡೆದಿದೆ.

ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಕಾಂಗ್ರೆಸ್ ಪಕ್ಷವು ಬಿಜೆಪಿ ಕಚೇರಿಯ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಮುತ್ತಿಗೆ ಹಾಕಲು ಯೋಜಿಸಿದ್ದರು.

ಈ ವೇಳೆ ಪ್ರತಿಭಟನಾ ಸ್ಥಳದ ಮಾಹಿತಿಯನ್ನು (ಲೋಕೇಶನ್) ಶಾಸಕರ ಮೊಬೈಲ್‌ಗೆ ಕಳುಹಿಸಲಾಗಿತ್ತು. ಕಳುಹಿಸಲಾದ ಲೋಕೇಶನ್ ಆಧಾರದ ಮೇಲೆಯೇ ಶಾಸಕರ ಕಾರು ಚಾಲಕ, ಬಿ.ಪಿ. ಹರೀಶ್ ಅವರನ್ನು ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಬಳಿ ಕರೆತಂದು ಇಳಿಸಿದ್ದಾನೆ.

ಹರೀಶ್‌ ಅವರು ಕಾರಿನಿಂದ ಇಳಿದ ಕೂಡಲೇ ಅಲ್ಲಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಅವರ ಮೇಲೆ ಮೊಟ್ಟೆ ಎಸೆದಿದ್ದಾರೆ. ಕೂಡಲೇ ಅಲ್ಲಿದ್ದ ಪೊಲೀಸರು ಬಿಪಿ ಹರೀಶ್‌ ಅವರನ್ನು ರಕ್ಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

banner

ಇನ್ನೂ ಬಿಪಿ ಹರೀಶ್‌ ಪ್ರತಿಕ್ರಿಯಿಸಿ, ನಮ್ಮ ನಾಯಕ ಅಶೋಕ್ ಕರೆದಿದ್ದರು. ಅವರು ಇಲ್ಲಿ ಇರಬೇಕು ಅಂದ್ಕೊಂಡು ಡ್ರೈವರ್ ಇಳಿಯಿರಿ ಎಂದ. ಆಗ ನಾನು ಇಳಿದೆ. ಆಗ ಕಾಂಗ್ರೆಸ್‌ ಕಾರ್ಯಕರ್ತರು ಓಡಿಸಿಕೊಂಡು ಬಂದು ಮೊಟ್ಟೆ ಮತ್ತು ಕೈಯಲ್ಲಿ ಹೊಡೆದರು ಎಂದು ತಿಳಿಸಿದರು.

You may also like