ತಮಿಳುನಾಡಿನ ಸೇಂಧಿ ವ್ಯಾಪಾರಿ ಒಬ್ಬರು ಮರ ಏರುವ ಕಾರ್ಮಿಕರ ಕೊರತೆಯಿಂದ ಬೇಸತ್ತು, ಕೊನೆಗೆ ತಾಳೆ ಮರಕ್ಕೆ ತಾನೇ 60 ಸಾವಿರ ಖರ್ಚು ಮಾಡಿ ಮೆಟ್ಟಿಲನ್ನೇ ನಿರ್ಮಿಸಿದ್ದಾರೆ.

ತೂತುಕುಡಿಯ ಸಾಲೈಪುದೂರ್ಗ್ರಾಮಸ್ಥ ದಿನಕರಾಜ್ ಇಂತಹ ಮಹಾತ್ಕಾರ್ಯ ಮಾಡಿದ ಅಸಾಮಿ. ಅವರು ತಮ್ಮ ವ್ಯಾಪ್ತಿಗೆ ಒಳಪಟ್ಟ 55 ಮೀ. ಎತ್ತರದ ತಾಳೆ ಮರಕ್ಕೆ ಸುರುಳಿ ಸುತ್ತಿ ಬರುವಂತೆ ಮೆಟ್ಟಿಲು ನಿರ್ಮಿಸಿದ್ದಾರೆ. ಇದಕ್ಕಾಗಿ 60000 ರೂ. ಖರ್ಚು ಮಾಡಿದ್ದಾರೆ.
ಸೇಂಧಿ ಇಳಿಸಲು ಇತ್ತೀಚಿಗೆ ಕಾರ್ಮಿಕರ ಸಮಸ್ಯೆ ಬಹಳ ಕಾಡುತ್ತಿತ್ತು ಕೊನೆಗೆ ದಾರಿ ತೋಚದೆ ಸ್ವಂತ ಖರ್ಚಿನಲ್ಲಿ ಎತ್ತರದ ಮರಕ್ಕೆ ಮೆಟ್ಟಿಲುಗಳನ್ನು ಮಾಡಿಸಿದ್ದೇನೆ. ಮೆಟ್ಟಿಲುಗಳಿರುವುದರಿಂದ, ತಾಜಾ ಸೇಂದಿ ಯನ್ನು ಸುಲಭವಾಗಿ ಇಳಿಸಬಹುದು’ ಎಂದಿದ್ದಾರೆ.
