ಇದುವರೆಗೂ ಆರ್ ಎಸ್ ಎಸ್ ನೋಂದಣಿಯ ಬಗ್ಗೆ ತಕರಾರು ಎತ್ತುತ್ತಿದ್ದ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಇದೀಗ ನಾನು ಅಧಿಕಾರದಲ್ಲಿ ಇರುವವರೆಗೂ ಆರ್ ಎಸ್ ಎಸ್ ಪಥ ಸಂಚಲನಕ್ಕೆ ಅನುಮತಿ ಕಡ್ಡಾಯ ಎಂದು ಸಂಘಕ್ಕೆ ವಾರ್ನಿಂಗ್ ಕೊಟ್ಟಿದ್ದರು. ಇದರ ಬೆನ್ನಲ್ಲೇ ಆರ್ ಎಸ್ ಎಸ್ ರಾಷ್ಟ್ರೀಯ ಪ್ರಾಂತ ಪ್ರಚಾರಕರ ಸಮಾವೇಶವನ್ನು ಬೆಳಗಾವಿಯಲ್ಲಿ ಆಯೋಜಿಸಿತ್ತು. ಹೀಗಾಗಿ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಈ ಸಮಾವೇಶದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ಹಲವರ ಕುತೂಹಲವಾಗಿತ್ತು. ಆದರೆ ಇದೀಗ ನಮ್ಮ ಹೆಮ್ಮೆಯ ಹೋಂ ಮಿನಿಸ್ಟರ್ ಯಾಕೋ ಸೈಲೆಂಟ್ ಆದಂತೆ ಕಾಣುತ್ತಿದೆ.

ಯಾಕೆಂದ್ರೆ ಬೆಳಗಾವಿಯಲ್ಲಿ ನಡೆಯುತ್ತಿರುವ RSS ರಾಷ್ಟ್ರೀಯ ಪ್ರಾಂತ ಪ್ರಚಾರಕರ ಸಮಾವೇಶ ಖಾಸಗಿ ಕಾರ್ಯಕ್ರಮ. ಅದಕ್ಕೆ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಉಸುರಿ ಸುಮ್ಮನಾಗಿಬಿಟ್ಟಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಬೀದಿಗಿಳಿದು ಬೃಹತ್ ಮೆರವಣಿಗೆ ನಡೆಸುತ್ತೇವೆ ಎಂದಾದರೆ, ಆಗ ಅನುಮತಿ ಬೇಕಾಗುತ್ತದೆ. ಅವರು ಮನವಿ ಸಲ್ಲಿಸಬಹುದು, ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಆಧರಿಸಿ ಅನುಮತಿ ನೀಡಬೇಕೋ ಅಥವಾ ಕಾರ್ಯಕ್ರಮ ಮುಂದೂಡಿ ಎಂದು ಸಲಹೆ ನೀಡಬೇಕೋ ಎಂಬುದನ್ನು ನಿರ್ಧರಿಸುತ್ತೇವೆ ಎಂದರು.
