2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಪ್ರಥಮ ಭಾಷೆಯಲ್ಲಿ 125 ಅಂಕಗಳಿಗೆ 125 ಅಂಕಗಳನ್ನು ಗಳಿಸಿರುವ ಚಿಂತಾಮಣಿ ತಾಲೂಕಿನ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಯಿತು.

ನಗರದ ರಾಧಾಕೃಷ್ಣ ಪಾರ್ಟಿ ಹಾಲ್ನಲ್ಲಿ ಆಯೋಜನೆ ಮಾಡಿದ್ದ ಸಾಧಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದಲ್ಲಿ 35 ವಿದ್ಯಾರ್ಥಿಗಳಿಗೆ ನಗರದ ಆಜಾದ್ ಚೌಕದಲ್ಲಿರುವ ಶಿವ ಜ್ಯುವೆಲ್ಲರ್ಸ್ ಮಾಲೀಕ ಬೆಳ್ಳಿಯ ಪೆನ್ನನ್ನು ನೀಡಿದರು. ನಂತರ ಮಾತನಾಡುತ್ತಾ, ಬುದ್ಧಿವಂತರಾಗಿ, ಜ್ಞಾನವಂತರಾಗಿ, ಕನ್ನಡಮ್ಮನ ಸೇವೆ ಮಾಡಿ, ನಿಮ್ಮ ಭವಿಷ್ಯವನ್ನು ಸುಂದರವಾಗಿಸಿ ಎಂದು ಹೇಳಿದರು.
