ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರಗಳಾದ ಅಯೋಧ್ಯೆ ಬದರಿನಾಥ ಸೇರಿದಂತೆ ಅನೇಕ ದೇವಾಲಯಗಳಲ್ಲಿ ದೇಣಿಗೆ ಹಗರಣ ನಡೆದಿರುವುದು, ಅದರ ಒಂದೊಂದು ಕರ್ಮಕಾಂಡವು ಬಯಲಾಗುತ್ತಿರುವುದನ್ನು ನಾವು ಪ್ರತಿನಿತ್ಯವೂ ನೋಡುತ್ತಿದ್ದೇವೆ. ಇನ್ನು ಅನೇಕ ದೇವಾಲಯಗಳಲ್ಲಿ ಈ ಹಗರಣ ನಿಗೂಢವಾಗಿ ಉಳಿದಿದ್ದು, ಅದು ಬಯಲಾಗಬೇಕಷ್ಟೆ. ಇದರ ನಡುವೆಯೇ ವಿಶ್ವವಿಖ್ಯಾತ, ಐತಿಹಾಸಿಕ ಬೇಲೂರು ಶ್ರೀ ಚೆನ್ನಕೇಶವ ಸ್ವಾಮಿ ದೇವಾಲಯದಲ್ಲಿ ನಡೆದ ಹುಂಡಿ ಎಣಿಕೆ ವೇಳೆ ವ್ಯಕ್ತಿಯೊಬ್ಬ ₹1.98 ಲಕ್ಷ ಹಣವನ್ನು ಕಳ್ಳತನ ಮಾಡಲು ಯತ್ನಿಸಿದ ಘಟನೆ ನಡೆದಿದೆ.

ಹಣ ಕದಿಯಲು ಯತ್ನಿಸಿದ ವ್ಯಕ್ತಿಯನ್ನು ವ್ಯಕ್ತಿಯನ್ನು ನೀಲಕಂಠ ಎಂದು ಗುರುತಿಸಲಾಗಿದೆ. ಬೇಲೂರು ಪಟ್ಟಣದ ನಿವಾಸಿಯಾದ ಈತ, ಎಣಿಕೆ ಕಾರ್ಯದ ವಿಡಿಯೋಗ್ರಫಿ ಮಾಡಲು ಬಂದು ಹಣವನ್ನು ಜರ್ಕಿನ್ ಒಳಗೆ ಮುಚ್ಚಿಡುತ್ತಿದ್ದಾಗ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದಾನೆ. ಆರೋಪಿಯನ್ನು ದೇವಾಲಯದ ಸಿಬ್ಬಂದಿ ಸ್ಥಳದಲ್ಲೇ ಹಿಡಿದು, ಹಣವನ್ನು ವಶಪಡಿಸಿಕೊಂಡು ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ.
