Home » ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ರೇಷನ್ ವಿತರಣೆಗೆ ಸರ್ಕಾರ ಆದೇಶ!

ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ರೇಷನ್ ವಿತರಣೆಗೆ ಸರ್ಕಾರ ಆದೇಶ!

0 comments

ರಾಜ್ಯ ಸರ್ಕಾರವು ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ ನೀಡಿದ್ದು, ಪಡಿತರ ವಿತರಣೆಯನ್ನು ಚುರುಕುಗೊಳಿಸಲು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ನ್ಯಾಯಬೆಲೆ ಅಂಗಡಿಗಳ ಕೆಲಸದ ಅವಧಿಯನ್ನು ಗಣನೀಯವಾಗಿ ವಿಸ್ತರಿಸಿ ಆದೇಶ ಹೊರಡಿಸಿದೆ.

ಆಹಾರ ಇಲಾಖೆಯ ಆಯುಕ್ತರ ಕಚೇರಿಯಿಂದ ಹೊರಡಿಸಲಾದ ಹೊಸ ಸುತ್ತೋಲೆಯ ಪ್ರಕಾರ, ರಾಜ್ಯಾದ್ಯಂತ ಜುಲೈ-2026 ರ ಮಾಹೆಯ ಪಡಿತರ ಹಂಚಿಕೆಯನ್ನು ಪೂರ್ಣಗೊಳಿಸಲು ಪ್ರತಿ ದಿನ ಬೆಳಿಗ್ಗೆ 6:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ನ್ಯಾಯಬೆಲೆ ಅಂಗಡಿಗಳನ್ನು ತೆರೆದಿಡಲು ಆದೇಶಿಸಲಾಗಿದೆ.

ಸಮಯ ವಿಸ್ತರಣೆಗೆ ಕಾರಣವೇನು?:

ಜುಲೈ ತಿಂಗಳ ಎನ್‌ಎಫ್‌ಎಸ್‌ಎ (NFSA) ಮತ್ತು ಅನ್ನಭಾಗ್ಯ (Anna Bhagya) ಯೋಜನೆಯಡಿ ಪಡಿತರ ಹಂಚಿಕೆ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಭಾರತೀಯ ಆಹಾರ ನಿಗಮದಿಂದ (FCI) ಓಎಂಎಸ್‌ಎಸ್ (D) ಅಕ್ಕಿಯ ಎತ್ತುವಳಿ ಪ್ರಕ್ರಿಯೆಯು ನಡೆಯುತ್ತಿರುವುದರಿಂದ, ಪಡಿತರವು ನ್ಯಾಯಬೆಲೆ ಅಂಗಡಿಗಳಿಗೆ ತಲುಪಿದ ಕೂಡಲೇ ವಿಳಂಬವಿಲ್ಲದೆ ಸಾರ್ವಜನಿಕರಿಗೆ ತಲುಪಿಸಬೇಕಿದೆ. ಜುಲೈ ತಿಂಗಳ ಅಂತ್ಯದೊಳಗೆ ಎಲ್ಲಾ ಫಲಾನುಭವಿಗಳಿಗೆ ಪಡಿತರ ತಲುಪಿಸುವ ಗುರಿಯನ್ನು (Target) ಇಲಾಖೆ ಹೊಂದಿದೆ.

banner

You may also like