ಬಾಲಿವುಡ್ನ ಬಾದ್ಶಾ, ಕಿಂಗ್ ಖಾನ್, ಸೂಪರ್ ಸ್ಟಾರ್ ಶಾರುಖ್ ಖಾನ್ ಇಂದು ಕರಾವಳಿ ನಗರಿ ಮಂಗಳೂರಿಗೆ ಬಂದಿದ್ದಾರೆ. ಶಾರುಖ್ ಖಾನ್ ಮಂಗಳೂರಿಗೆ ಬರುವ ಸುದ್ದಿಯಿಂದಲೇ ಕರಾವಳಿಯ ಅಭಿಮಾನಿಗಳಲ್ಲಿ ಹೊಸ ಸಂಚಲನ ಉಂಟು ಮಾಡಿದೆ.

ಶಾರುಖ್ ಖಾನ್ ಅವರು ಇಂದು ಬೆಳಿಗ್ಗೆ ವಿಶೇಷ ವಿಮಾನದ ಮೂಲದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದು, ವಿಮಾನ ನಿಲ್ದಾಣದ ಹೊರಗೆ ಬಾದ್ಶಾ ನನ್ನು ನೋಡಲು ಅಭಿಮಾನಿಗಳ ದಂಡೇ ಇತ್ತು. ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ಶಾರುಖ್ ತಮ್ಮ ಎಂದಿನ ಮುಗುಳ್ನಗೆಯ ಮೂಲಕ ಅಭಿಮಾನಿಗಳತ್ತ ಕೈ ಬೀಸಿದರು.
ಮಂಗಳೂರಿನ ಖ್ಯಾತ ಸಂಸ್ಥೆಯಾದ ʼರೋಹನ್ ಕಾರ್ಪೊರೇಷನ್ʼ ಆಯೋಜನೆ ಮಾಡಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಶಾರುಖ್ ಆಗಮಿಸಿದ್ದಾರೆ. ಮಂಗಳೂರಿನ ಅಡ್ಯಾರು ಗಾರ್ಡನ್ನಲ್ಲಿ ಈ ವಿಶೇಷ ಸಮಾರಂಭ ನಡೆಯಲಿದ್ದು, ನಗರದ ಗಣ್ಯರು, ಆಯ್ದ ಅತಿಥಿಗಳು ಸಾಕ್ಷಿಯಾಗಲಿದ್ದಾರೆ.
ತಾನು ಐದು ವರ್ಷದವರೆಗೆ ಮಂಗಳೂರಿನಲ್ಲಿಯೇ ತನ್ನ ಅಜ್ಜ, ಅಜ್ಜಿ ಜೊತೆ ಇದ್ದಿರುವುದಾಗಿ ಹೇಳಿರುವ ಶಾರುಖ್ಖಾನ್, ಇದೀಗ ಹಲವು ವರ್ಷಗಳ ಬಳಿಕ ಮಂಗಳೂರಿಗೆ ಕಾಲಿಟ್ಟಿದ್ದಾರೆ. ಕರಾವಳಿಯ ಜನತೆಗೆ ಇದೊಂದು ಮರೆಯಲಾಗದ ದಿನವಾಗಿ ಉಳಿಯವುದರಲ್ಲಿ ಎರಡು ಮಾತಿಲ್ಲ.

