ತಮಿಳು ಚಿತ್ರರಂಗದ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ದ್ ರವಿಚಂದರ್ ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡದ ಒಡತಿ ಕಾವ್ಯ ಮಾರನ್ ಜೊತೆ ವಿವಾಹವಾಗಲಿದ್ದಾರೆ. ಇವರ ವಿವಾಹದ ಕುರಿತುಊಹಾಪೋಹಗಳು ಹರಡಿದ್ದವು. ಒಂದು ವರ್ಷದ ಹಿಂದೆ, ಅನಿರುದ್ಧ್ ಈ ವರದಿಗಳನ್ನು ಕೇವಲ ವದಂತಿಗಳೆಂದು ತಳ್ಳಿಹಾಕಿದರು. ಆದಾಗ್ಯೂ, ಅನಿರುದ್ಧ್ ರವಿಚಂದರ್ ಅವರ ಕುಟುಂಬ ಸದಸ್ಯರು ಈಗ ಈ ಸುದ್ದಿಯನ್ನು ದೃಢಪಡಿಸಿದ್ದಾರೆ.

ನಟ ಮತ್ತು ನಾಟಕಕಾರ ಹಾಗೂ ಅನಿರುದ್ಧ್ ರವಿಚಂದರ್ ಅವರ ಚಿಕ್ಕಪ್ಪ ಆಗಿರುವ ವೈ.ಜಿ. ಮಹೇಂದ್ರ ಅವರು, ಕೆಪಿಟಿವಿ (KPTV) ಜೊತೆಗಿನ ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಅನಿರುದ್ಧ್ ಬಗ್ಗೆ ಮಾತನಾಡುತ್ತಾ, “ಅವನು ತುಂಬಾ ಮೃದು ಸ್ವಭಾವದ ಹುಡುಗ” ಎಂದು ಮಹೇಂದ್ರ ಹೇಳಿದರು. ಅಲ್ಲದೆ, ಈ ಸಂಗೀತ ಸಂಯೋಜಕರು ದೊಡ್ಡ ಮಟ್ಟದ ವಿವಾಹ ಸಮಾರಂಭವೊಂದಕ್ಕೆ ಸಜ್ಜಾಗುತ್ತಿರುವುದರಿಂದ ಅವರಿಗೆ ಅಭಿನಂದನೆಗಳು ಸಲ್ಲಬೇಕು ಎಂದೂ ಅವರು ತಿಳಿಸಿದರು.
ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯ ಮಾರನ್ SRH ನ ಸಹ-ಮಾಲೀಕ ಮತ್ತು ಮುಖ್ಯಸ್ಥೆ ಮಾತ್ರವಲ್ಲದೆ SA20 ಲೀಗ್ನಲ್ಲಿ ಸನ್ರೈಸರ್ಸ್ ಈಸ್ಟರ್ನ್ ಕೇಪ್ ಮತ್ತು ದಿ ಹಂಡ್ರೆಡ್ನಲ್ಲಿ ಸನ್ರೈಸರ್ಸ್ ಲೀಡ್ಸ್ನ ಮುಖ್ಯಸ್ಥೆ ಮತ್ತು ಸನ್ ಟಿವಿ ನೆಟ್ವರ್ಕ್ ಲಿಮಿಟೆಡ್ನ ಕಾರ್ಯನಿರ್ವಾಹಕ ನಿರ್ದೇಶಕಿಯೂ ಆಗಿದ್ದಾರೆ.
ಅನಿರುದ್ಧ್ ಅವರು ಭಾರತೀಯ ಚಿತ್ರರಂಗದ ಕೆಲವು ಪ್ರಮುಖ ಕಲಾವಿದರಿಗೆ ಸಂಗೀತ ಸಂಯೋಜಿಸಿದ್ದಾರೆ, ಅವರಲ್ಲಿ ರಜನಿಕಾಂತ್, ಕಮಲ್ ಹಾಸನ್, ಶಾರುಖ್ ಖಾನ್, ವಿಜಯ್, ಅಜಿತ್ ಕುಮಾರ್, ಪವನ್ ಕಲ್ಯಾಣ್ ಮತ್ತು ಜೂನಿಯರ್ ಎನ್ಟಿಆರ್ ಸೇರಿದ್ದಾರೆ. ಸಂಗೀತ ಸಂಯೋಜಕರಾಗಿ ಅವರ ಇತ್ತೀಚಿನ ಬಿಡುಗಡೆ ಲವ್ ಇನ್ಶುರೆನ್ಸ್ ಕೊಂಪನಿ, ನಂತರ ಅವರು ‘ಅರವಿಂದ್’ ಎಂಬ ಆಲ್ಬಮ್ ಹಾಡನ್ನು ಬಿಡುಗಡೆ ಮಾಡಿದರು.

