ಕೋಲಾರ ಜಿಲ್ಲೆಯ ಮಾಲೂರು ಜೆಎಂಎಫ್ಸಿ ನ್ಯಾಯಾಧೀಶೆ ಗಾಯತ್ರಿ ಅವರನ್ನು ಬೀದರ್ನ ಹುಮನಾಬಾದ್ನ ಜೆಎಂಎಫ್ಸಿ ನ್ಯಾಯಾಲಯಕ್ಕೆ ಮಾಡಿ ಆದೇಶ ನೀಡಲಾಗಿದೆ.

ಹೈಕೋರ್ಟ್ ರಿಜಿಸ್ಟರ್ ಚಂದ್ರಶೇಖರ ರೆಡ್ಡಿ ಅವರು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಇನ್ನೋವಾರ ಕಾರಿನಲ್ಲಿ ನ್ಯಾಯಾಧೀಶೆ ಹೋಗುವಾಗ ಬೈಕ್ ಸವಾರ ವಿನಯ್ ಎಂಬಾತ ಅತಿವೇಗವಾಗಿ ಬಂದು ಕಾರನ್ನು ಓವರ್ಟೇಕ್ ಮಾಡಿ, ಕೈ ತೋರಿಸಿ ಹೋಗಿದ್ದ ಎನ್ನುವ ಆರೋಪವಿತ್ತು. ಇದಕ್ಕೆ ಕೋಪಗೊಂಡ ನ್ಯಾಯಧೀಶರು ಬೈಕನ್ನು ಬೆನ್ನತ್ತಿ ವಿನಯ್ ಮೇಲೆ ದರ್ಪ ತೋರಿಸಿ ರಂಪಾಟ ಮಾಡಿರುವ ವಿಡಿಯೋ ವೈರಲ್ ಆಗಿತ್ತು.
ಅನಂತರ ಬೈಕ್ ಸವಾರನ ಮೇಲೆ ನ್ಯಾಯಾಧೀಶೆ ಗಾಯತ್ರಿ ಅವರು ಎಫ್ಐಆರ್ ದಾಖಲು ಮಾಡಿದ್ದರು. ಈ ಎಫ್ಐಆರ್ ರದ್ದು ಮಾಡುವಂತೆ ಬೈಕ್ ಸವಾರ ವಿನಯ್ ಹೈಕೋರ್ಟ್ ಮೊರೆ ಹೋಗಿದ್ದು, ವಿಚಾರಣೆ ನಡೆಸಿದ ಪೀಠ ಅಸಮಾಧಾನ ವ್ಯಕ್ತಪಡಿಸಿ, ನ್ಯಾಯಾಧೀಶೆ ಗಾಯತ್ರಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ರಿಜಿಸ್ಟರ್ಗೆ ಸೂಚಿಸಿದ್ದರು.
ಪರಿಶೀಲನೆ ಮಾಡಿದ ರಿಜಿಸ್ಟರ್ ಅವರು ನ್ಯಾಯಾಧೀಶೆ ಗಾಯತ್ರಿ ಅವರನ್ನು ಬೀದರ್ಗೆ ವರ್ಗಾವಣೆ ಮಾಡಿದ್ದಾರೆ.

