Home » ಬೆಳ್ತಂಗಡಿ ಹನ್ನೊಂದು ಕಡೆ ಕಳ್ಳತನ ಪ್ರಕರಣ-ಅಂತರರಾಜ್ಯ ಚೋರನ ಬಂಧನ

ಬೆಳ್ತಂಗಡಿ ಹನ್ನೊಂದು ಕಡೆ ಕಳ್ಳತನ ಪ್ರಕರಣ-ಅಂತರರಾಜ್ಯ ಚೋರನ ಬಂಧನ

0 comments

ಬೆಳ್ತಂಗಡಿ: ಮೇ 19ರಂದು ಕೋರ್ಟ್ ರಸ್ತೆಯ ಧರ್ಮಶ್ರೀ ಬಿಲ್ಡಿಂಗ್ ನ ಮೊದಲ ಮಹಡಿಯ ಎಲ್ಲಾ ಕೋಣೆಗಳಿಗೆ ಹಾಗೂ ಮೂರು ಮಾರ್ಗದ ಬಳಿಯ ಮಾತೃಶ್ರೀ ಹೊಟೇಲ್ ಸೇರಿದಂತೆ 11ಕಡೆ ಕಳ್ಳತನ ನಡೆಸಿರುವ ಆರೋಪದಡಿ ಬೆಳ್ತಂಗಡಿ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ತಮಿಳುನಾಡಿನ ಮೂಲದ ಜಯಕುಮಾರ್ ಎಂಬ ವ್ಯಕ್ತಿಯನ್ನು ಗುರುವಾಯನಕೆರೆಯಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ದ ವೇಳೆ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಳ್ಳತನವಾದ ಅಂಗಡಿಗಳ ಮಾಲಕರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಪೊಲೀಸ್ ಇಲಾಖೆಯಿಂದ ಅಧಿಕೃತ ಮಾಹಿತಿ ನೀಡಿಲ್ಲ.

You may also like