ಬಿಜೆಪಿ ಪಕ್ಷದಲ್ಲಿ ಯಾವುದು ಸರಿ ಇಲ್ಲ. ಪಕ್ಷದೊಳಗಡೆ ಅಲ್ಲೋಲಕಲ್ಲೋಲವಾಗಲು ಮೂಲ ಕಾರಣ ಶೋಭಾ ಕರಂದ್ಲಾಜೆ. ಆಯಮ್ಮ ನಿಂದಲೇ ಎಲ್ಲವೂ ನಡೆಯುತ್ತಿದೆ ಎಂದು ಶಾಸಕ ಎಸ್ ಟಿ ಸೋಮಶೇಖರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು ಭಾರತೀಯ ಜನತಾ ಪಾರ್ಟಿಯೊಳಗಿನ ಎಲ್ಲಾ ಅನಾಹುತಗಳಿಗೂ ಶೋಭಾ ಮೇಡಂ ಕಾರಣ. ಈ ಮೇಡಂಗೆ ವಿಜಯೇಂದ್ರ ಹಾಗೂ ಆರ್ ಅಶೋಕ್ ನನ್ನು ಕಂಡರೂ ಆಗುವುದಿಲ್ಲ. ಆಯಮ್ಮನನ್ನು ಮೊದಲು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ನಿಲ್ಲಿಸಿ ಪ್ರಮಾಣ ಮಾಡಿಸಬೇಕು. ವಿಜೇಂದ್ರ ಮತ್ತು ಅಶೋಕ್ ಗೆ ಕೆಟ್ಟ ಹೆಸರು ತರಬೇಕು ಎಂಬುದೇ ಅವರ ಉದ್ದೇಶವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಶೋಭಾ ಕರಂದ್ಲಾಜೆ ನಮಗೆ ಬುದ್ಧಿ ಹೇಳುವ ಅಗತ್ಯವಿಲ್ಲ. ಮುಖ್ಯಮಂತ್ರಿಗಳು ಕರೆದು ನಮಗೆ ವೋಟ್ ಹಾಕಿ ಎಂದು ಹೇಳಿದರು. ಅನುದಾನ ಕೊಡುತ್ತೇವೆ ಎಂದು ಭರವಸೆ ನೀಡಿದರು. ಹಾಗಾಗಿ ನಾವು ಅವರಿಗೆ ಮತ ನೀಡಿದ್ದೇವೆ ಎಂದು ಧೈರ್ಯವಾಗಿ ಹೇಳುತ್ತೇನೆ ಎಂದು ಹೇಳಿದ್ದಾರೆ.
