Home » ಫುಟ್ಪಾತ್ ವ್ಯಾಪಾರಿಗಳ ಬಳಿಕ ವಾಹನ ಸವಾರರಿಗೆ ಶಾಕ್ ಕೊಟ್ಟ ಸಚಿವ ಕೃಷ್ಣ ಭೈರೇಗೌಡ!!

ಫುಟ್ಪಾತ್ ವ್ಯಾಪಾರಿಗಳ ಬಳಿಕ ವಾಹನ ಸವಾರರಿಗೆ ಶಾಕ್ ಕೊಟ್ಟ ಸಚಿವ ಕೃಷ್ಣ ಭೈರೇಗೌಡ!!

0 comments

ಬೆಂಗಳೂರಿನಲ್ಲಿ ಫುಟ್ಪಾತ್ ಮೇಲಿನ ವ್ಯಾಪಾರಸ್ಥರನ್ನು ತೆರವುಗೊಳಿಸಿದ ಬಳಿಕ ಇದೀಗ ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ವಾಹನ ಸವಾರರಿಗೆ ಶಾಕ್ ನೀಡಲು ಮುಂದಾಗಿದ್ದಾರೆ. 

ಇದುವರೆಗೂ ಬೆಂಗಳೂರಿನಲ್ಲಿ ಫುಟ್ಪಾತ್ ಮೇಲಿರುವ ವ್ಯಾಪಾರಿಗಳನ್ನು ತೆರವುಗೊಳಿಸಲಾಯಿತು. ಈ ಬೆನ್ನಲ್ಲೇ ಇದೀಗ ಸಚಿವರು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು ರಸ್ತೆ ಬದಿಯಲ್ಲಿ ಹಲವು ಸಮಯದಿಂದ ನಿಂತಿರುವ ವಾಹನಗಳ ತೆರವಿಗೆ ಮುಂದಾಗಿದ್ದಾರೆ. ಹೀಗಾಗಿ ಹಳೆ ಗಾಡಿಗಳ ಟೋಯಿಂಗ್ ಗೆ ಚಾಲನೆ ನೀಡಲಾಗಿದೆ. ಸೋ, ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳ ತೆರವು ಕಾರ್ಯಚರಣೆ ನಡೆದಿದೆ.

ಹಳೆ ವಾಹನ ಮಾಲೀಕರಿಗೆ 7 ದಿನಗಳ ಕಾಲ ಗಡುವು ನೀಡಲಾಗಿದೆ. ಸ್ವತಹ ಸಚಿವ ಕೃಷ್ಣ ಬೈರೇಗೌಡರೇ ಇದೀಗ ಈ ಕಾರ್ಯಾಚರಣೆಗೆ ಫೀಲ್ಡ್ ಗೆ ಇಳಿದಿದ್ದು, ನಿಂತಲ್ಲೆ ನಿಂತ ಕಾರುಗಳಿಗೆ ನೋಟಿಸ್ ಅಂಟಿಸಿ ಕಾರುಗಳ ಚಕ್ರಗಳಿಗೆ ಲಾಕ್ ಮಾಡಿದ್ದಾರೆ. ಅಕಸ್ಮಾತ್ ಕಾರುಗಳನ್ನು ಶಿಫ್ಟ್ ಮಾಡದಿದ್ದರೆ ವಾಹನಗಳ ಜಪ್ತಿ ಮಾಡಲಾಗುತ್ತದೆ. ಈ ಒಂದು ಕಾರ್ಯಾಚರಣೆಗೆ ಸಾಂಕೇತಿಕವಾಗಿ ಕೃಷ್ಣಭೈರೇಗೌಡ ಚಾಲನೆ ನೀಡಿದ್ದು ಜಿಬಿಎ ಅಧಿಕಾರಿಗಳು, ಸಂಚಾರಿ ಪೊಲೀಸರು ಉಪಸ್ಥಿತರಿದ್ದರು. 

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು ಬೀಡಾಡಿ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿದ್ದಾರೆ ಇವುಗಳನ್ನು ತೆರವು ಮಾಡಬೇಕು ಅಂತ 15 ದಿನಗಳ ಹಿಂದೆಯೇ ನಾನು ಮನವಿ ಮಾಡಿದ್ದು, ಅಲ್ಲದೆ ಎಚ್ಚರಿಕೆಯನ್ನು ಸಹ ನೀಡಿದ್ದೆ. ಆದರೂ ಸಹ ಜನರು ತಮ್ಮ ಗಾಡಿಗಳನ್ನು ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿಟ್ಟು ಸಾರ್ವಜನಿಕರಿಗೆ ಓಡಾಡುವುದಕ್ಕೆ ತೊಂದರೆ ಮಾಡುತ್ತಿದ್ದಾರೆ.ಅಲ್ಲದೆ ಜನರಿಗೆ ಸೇರಿದ ಜಾಗವನ್ನು ಅವರು ಅತಿಕ್ರಮಣ ಮಾಡಿದ್ದಾರೆ. ವಾಹನಗಳನ್ನು ತಿಂಗಳುಗಟ್ಟಲೆ ಇಲೆ ಬಿಟ್ಟು ಹೋಗಿರುತ್ತಾರೆ ಇವು ಯಾರಿಗೆ ಸೇರಿವೆ ಅಂತ ಗೊತ್ತಿರುವುದಿಲ್ಲ. ಇದರಿಂದ ಬೆಂಗಳೂರಲ್ಲಿ ಜನರಿಗೆ ಓಡಾಡೋಕ್ಕಿಂತ ಸಾರ್ವಜನಿಕರಿಗೆ ಸೇರಿದ ಜಾಗ ಅವರು ಸ್ವಂತಕ್ಕೆ ಅತಿಕ್ರಮಣ ಮಾಡಿಕೊಳ್ಳುವುದು ಕೂಡ ಕಾನೂನು ಉಲ್ಲಂಘನೆ ಆಗಿದೆ. ಇದಲ್ಲದೆ ಎಲ್ಲೆಂದರಲ್ಲಿ ಗಾಡಿಗಳನ್ನು ಬಿಟ್ಟರೆ ಅಪಘಾತಗಳು ಹೆಚ್ಚಾಗುತ್ತದೆ. ಹಾಗಾಗಿ ಬೆಂಗಳೂರು ಅಸಹ್ಯವಾಗಿ ಕಾಣುವುದಕ್ಕೆ ಇದು ಕೂಡ ಕಾರಣವಾಗಿದೆ. ಹಾಗಾಗಿ ಬಿಡಾಡಿ ವಾಹನಗಳನ್ನು ನಿರ್ಮೂಲನೆಗೆ ಇಂದು ಚಾಲನೆ ಕೊಟ್ಟಿದ್ದೇವೆ ಎಂದರು. 

banner

You may also like