ಕೇಂದ್ರ ಸರ್ಕಾರ ಬಹು ತಿದ್ದುಪಡಿ ಮಾಡಿ ಜಾರಿಗೊಳಿಸಿರುವ ವಿಬಿಜಿ ರಾಮ್ ಜಿ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವಕನೊಬ್ಬ ರಚಿಸಿದ ಲೋಗೋ ಆಯ್ಕೆಯಾಗಿದೆ.

ಕೇಂದ್ರ ಸರ್ಕಾರುವು ವಿಬಿಜಿ ರಾಮ್ ಜಿ ಯೋಜನೆಗೆ ‘ಲೋಗೊ’ ತಯಾರಿಸಿಕೊಡುವ ಅವಕಾಶವನ್ನು ದೇಶದ ಜನತೆಗೆ ನೀಡಿತ್ತು. ದೇಶದ ಸುಮಾರು 7 ಸಾವಿರಕ್ಕೂ ಹೆಚ್ಚು ಮಂದಿ ಲೋಗೊ ಡಿಸೈನ್ ಮಾಡಿ ಕಳುಹಿಸಿದ್ದರು. ಆನ್ಲೈನ್ ಮೂಲಕ ಲೋಗೊ ಗಳನ್ನು ಕಳಿಸುವ ಅವಧಿಯ ಕೊನೆ ಕ್ಷಣದಲ್ಲಿ ಪುತ್ತೂರಿನ ಯುವಕ ಕೆ ರಾಮಪ್ರಸಾದ್ ಎಂಬಾತ ತನ್ನ ಮನದಲ್ಲಿ ಮೂಡಿದ ಲೋಗೊವನ್ನು ಡಿಸೈನ್ ಮಾಡಿ ಕಳುಹಿಸಿದ್ದ. ಆದರೆ ಕೊನೆಗಳಿಗೆಯಲ್ಲಿ ಆ ಯುವಕ ಕಳುಹಿಸಿದ ಲೋಗೋ ನೇ ಆಯ್ಕೆಯಾಗಿದೆ.
ಈ ಲೋಗೋ ವಿನ್ಯಾಸವನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದ್ದು, ಜೂ.29ರಂದು ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅನಾವರಣ ಮಾಡಲಿದೆ. ಇದೇ ವೇಳೆ ರಾಮ್ ಪ್ರಸಾದ್ ಅವರನ್ನು ಸನ್ಮಾನಿಸಿ, ₹50 ಸಾವಿರ ನಗದು ಪುರಸ್ಕಾರ ನೀಡಿ ಸನ್ಮಾನಿಸಲಿದೆ.
ಲೋಗೋ ಕೊಡಲು ಕೇಂದ್ರ ಸರ್ಕಾರ ಎಲ್ಲರಿಗೂ ಮುಕ್ತ ಅವಕಾಶ ನೀಡಿತ್ತು. ಇಂಟರ್ನೆಟ್ನಲ್ಲಿ ಈ ವಿಷಯ ನೋಡಿದೆ. ಮಾರ್ಚ್ 30 ಕೊನೆಯ ದಿನವಾಗಿತ್ತು. ಕೊನೆಯ ಒಂದು ವಾರದಲ್ಲಿ ಸ್ಪರ್ಧೆಗಾಗಿ ಲೋಗೋ ಬಿಡಿಸಲು ತೊಡಗಿದೆ. ಮೊದಲು ವಿ.ಬಿ.ಜಿ. ರಾಮ್ ಜಿ ಯೋಜನೆಯ ಉದ್ದೇಶ, ಸ್ವರೂಪಗಳ ಬಗ್ಗೆ ತಿಳಿದುಕೊಂಡೆ. ಅದಕ್ಕೆ ತಕ್ಕದಾದ ಲೋಗೋ ಬರೆದೆ. ಆದರೆ ಸುಮಾರು 20 ಲೋಗೋ ರಚಿಸಿದರೂ ನನಗೆ ತೃಪ್ತಿಯಾಗಲಿಲ್ಲ. ಆಗಲೇ ಡೆಡ್ಲೈನ್ ಮುಗಿದಿತ್ತು. ಮಾರ್ಚ್ 30ರಂದು 5 ಸಾವಿರ ನೋಂದಣಿ ಕಾಣುತ್ತಿತ್ತು. ಇನ್ನಾಗದು ಎಂದು ಕೈಬಿಟ್ಟೆ. ಏ.1 ರಂದು ನೋಡಿದಾಗ 4 ದಿನ ವಿಸ್ತರಣೆ ಮಾಡಿದ್ದು ಗೊತ್ತಾಯಿತು. ಮತ್ತೆ ಗೀಚತೊಡಗಿದೆ. ಹಲವಾರು ಲೋಗೋ ಬರೆದ ಬಳಿಕ ಒಂದು ಲೋಗೋ ನನಗೆ ಇಷ್ಟವಾಯಿತು. ಏ.4ರಂದು ಕೊನೆಯ ಕ್ಷಣದಲ್ಲಿ ಅದನ್ನು ಕಳಿಸಿದೆ. ಆಕೆಯಾಗುತ್ತದೆ ಎಂಬ ಯಾವ ಭರವಸೆಯೂ ಇರಲಿಲ್ಲ ಆದರೆ ನನ್ನ ಅದೃಷ್ಟವೆಂಬಂತೆ ನಾನು ಮಾಡಿದ ಲೋಗೋ ಆಯ್ಕೆಯಾಗಿದೆ ಎಂದು ಲೋಗೋ ತಯಾರಿಸಿದ ಯುವಕ ಕೆ ರಾಮಪ್ರಸಾದ್ ಸಂತಸ ವ್ಯಕ್ತಪಡಿಸಿದ್ದಾರೆ.

