Home » ಉಕ್ರೇನ್‌ ಸರಕು ಹಡಗಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ: ನಿಶ್ಚಿತಾರ್ಥ ಮುಗಿಸಿ ತೆರಳಿದ್ದ ಯುವಕ ಸಾವು

ಉಕ್ರೇನ್‌ ಸರಕು ಹಡಗಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ: ನಿಶ್ಚಿತಾರ್ಥ ಮುಗಿಸಿ ತೆರಳಿದ್ದ ಯುವಕ ಸಾವು

0 comments

ಕೇರಳದ ಕಾಸರಗೋಡು ಜಿಲ್ಲೆಯವರಾದ 26 ವರ್ಷದ ಅಖಿಲ್ ಜೋಯನ್ ಅವರ ನಿಶ್ಚಿತಾರ್ಥವು ಮೂರು ತಿಂಗಳ ಹಿಂದೆ ಅವರ ಸ್ವಗ್ರಾಮದಲ್ಲಿ ನಡೆದಿತ್ತು. ಒಂದು ತಿಂಗಳ ಹಿಂದಷ್ಟೇ ಅವರು ಮತ್ತೆ ಕೆಲಸಕ್ಕೆ ಹಾಜರಾಗಿದ್ದರು ಮತ್ತು ಮುಂದಿನ ವರ್ಷದ ಏಪ್ರಿಲ್‌ನಲ್ಲಿ ಅವರ ವಿವಾಹ ನಿಗದಿಯಾಗಿತ್ತು. ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದ ಇವರು, ಉಕ್ರೇನ್ ಸಮೀಪ ಸರಕು ಸಾಗಣೆ ಹಡಗಿನ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಭಾನುವಾರ ಮೃತಪಟ್ಟ ನಾಲ್ವರು ಭಾರತೀಯರಲ್ಲಿ ಒಬ್ಬರು.

ಅಖಿಲ್ ಕೇರಳದ ಕಾಸರಗೋಡು ಜಿಲ್ಲೆಯ ವೆಲ್ಲರಿಕ್ಕುಂಡು ಮೂಲದವರಾಗಿದ್ದು, ತಮ್ಮ ಪೋಷಕರ ಏಕೈಕ ಪುತ್ರರಾಗಿದ್ದರು. ತಮ್ಮ ಮಗನ ಹಡಗು ಕಂಪನಿಯು ಈ ಘಟನೆಯ ಬಗ್ಗೆ ಇಮೇಲ್ ಮೂಲಕ ಕುಟುಂಬಕ್ಕೆ ಮಾಹಿತಿ ನೀಡಿತ್ತು, ಆದರೆ ಅಂದಿನಿಂದ ಈವರೆಗೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಅವರ ತಂದೆ ಜೋಯನ್ ತಿಳಿಸಿದ್ದಾರೆ.

ಗಿನಿ-ಬಿಸ್ಸೌ ಧ್ವಜವನ್ನು ಹೊಂದಿದ್ದ ‘ಎಂವಿ ಗೋಲ್ಡನ್ ಲಿಯೋ’ ನೌಕೆಯು ಭಾನುವಾರ ಉಕ್ರೇನ್‌ನ ಒಡೆಸಾ ಬಂದರಿನಿಂದ ಹೊರಟಿದ್ದಾಗ ಈ ದಾಳಿ ನಡೆದಿದೆ. ಈ ನೌಕೆಯಲ್ಲಿದ್ದ 17 ಸಿಬ್ಬಂದಿ ಸದಸ್ಯರ ಪೈಕಿ ಐವರು ಭಾರತೀಯರಿದ್ದರು. ನಾಲ್ವರು ಭಾರತೀಯರು ಮೃತಪಟ್ಟಿದ್ದು, ಒಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

You may also like