Home » ಶ್ರೀ ಕೃಷ್ಣನಂತೆ ಯಾವುದೇ ಮಗು ಜೈಲಿನಲ್ಲಿ ಜನಿಸಬಾರದು-ನಿಧಾ ಖಾನ್‌ಗೆ ಜಾಮೀನು ನೀಡಿದ ಕೋರ್ಟ್‌

ಶ್ರೀ ಕೃಷ್ಣನಂತೆ ಯಾವುದೇ ಮಗು ಜೈಲಿನಲ್ಲಿ ಜನಿಸಬಾರದು-ನಿಧಾ ಖಾನ್‌ಗೆ ಜಾಮೀನು ನೀಡಿದ ಕೋರ್ಟ್‌

0 comments

ಶ್ರೀಕೃಷ್ಣನ ರೀತಿಯಲ್ಲಿ ಯಾವುದೇ ಮಗು ಜೈಲಿನಲ್ಲಿ ಜನಿಸುವಂತಹ ನೋವು ಮತ್ತು ಸಾಮಾಜಿಕ ಕಳಂಕವನ್ನು ಅನುಭವಿಸಬಾರದು ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು ಟಿಸಿಎಸ್‌ ನಾಸಿಕ್‌ ಧಾರ್ಮಿಕ ಮತಾಂತರ ಆರೋಪ ಪ್ರಕರಣದ ಆರೋಪಿ ನಿಧಾ ಖಾನ್‌ಗೆ ಜಾಮೀನು ಮಂಜೂರು ಮಾಡಿದೆ.

ನಿಧಾ ಖಾನ್‌ ಐದು ತಿಂಗಳ ಗರ್ಭಿಣಿಯಾಗಿದ್ದು, ಎರಡು ತಿಂಗಳ ಬಳಿಕ ಸೋಮವಾರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನ್ಯಾಯಾಲಯವು ಆದೇಶ ನೀಡಿದೆ. ಗರ್ಭದಲ್ಲಿರುವ ಮಗುವಿನ ಹಿತದೃಷ್ಟಿಯಿಂದ ನ್ಯಾಯಾಂಗ ವಿವೇಚನಾಧಿಕಾರವನ್ನು ಬಳಸುವುದು ನ್ಯಾಯೋಚಿತ ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.

ಟಿಸಿಎಸ್ ಘಟಕದಲ್ಲಿ ಮಹಿಳಾ ಉದ್ಯೋಗಿಗಳ ಮೇಲೆ ಶೋಷಣೆ, ಬಲವಂತದ ಮತಾಂತರ ಯತ್ನ, ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಕಿರುಕುಳ ಮತ್ತು ಮಾನಸಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಒಟ್ಟು ಒಂಬತ್ತು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತನಿಖಾಧಿಕಾರಿಗಳ ಪ್ರಕಾರ, ನಿದಾ ಖಾನ್ ಸಂತ್ರಸ್ತರಿಗೆ ಬುರ್ಖಾ ಮತ್ತು ಧಾರ್ಮಿಕ ಸಾಹಿತ್ಯವನ್ನು ನೀಡುವ ಮೂಲಕ ಅವರ ಬ್ರೈನ್ ವಾಶ್ ಮಾಡುವಲ್ಲಿ ಭಾಗಿಯಾಗಿದ್ದರು. ಮೊಬೈಲ್ ಫೋನ್‌ನಲ್ಲಿ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಿದ, ನಮಾಜ್ ಮಾಡುವುದು ಹೇಗೆಂದು ಕಲಿಸಲು ಅವರ ಮನೆಗೆ ಭೇಟಿ ನೀಡಿದ ಮತ್ತು ಹಿಜಾಬ್ ಧರಿಸುವುದು ಹೇಗೆಂದು ತೋರಿಸಿದ ಆರೋಪವೂ ಅವರ ಮೇಲಿದೆ.

banner

You may also like