Home » ದೇವರ ದರ್ಶನಕ್ಕೆ ಕರೆದೊಯ್ದು, ಪರ್ಸ್‌ ಬೀಳಿಸಿ ಗಂಡನನ್ನು ಪ್ರಿಯಕರನ ಗ್ಯಾಂಗ್‌ನಿಂದ ಹ*ತ್ಯೆ ಮಾಡಿಸಿದ ಪತ್ನಿ

ದೇವರ ದರ್ಶನಕ್ಕೆ ಕರೆದೊಯ್ದು, ಪರ್ಸ್‌ ಬೀಳಿಸಿ ಗಂಡನನ್ನು ಪ್ರಿಯಕರನ ಗ್ಯಾಂಗ್‌ನಿಂದ ಹ*ತ್ಯೆ ಮಾಡಿಸಿದ ಪತ್ನಿ

0 comments

ತನ್ನ ವಿವಾಹೇತರ ಸಂಬಂಧಕ್ಕೆ ಗಂಡ ಅಡ್ಡಿ ಎನ್ನುವ ಕಾರಣಕ್ಕೆ ಮಹಿಳೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಪರ್ಸ್‌ ಬೀಳಿಸುವ ನೆಪ ಮಾಡಿ ಹಂತಕರ ಕೈಗೆ ಒಪ್ಪಿಸಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡಿಪಲ್ಲಿ ಮಂಡಲದಲ್ಲಿ ನಡೆದಿದೆ.

ತಮಿಳುನಾಡಿನ ಸುಳಗಿರಿ ನಿವಾಸಿ ರಮೇಶ್‌ ಕೊಲೆಯಾದ ವ್ಯಕ್ತಿ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಮೇಶ್‌ ಪತ್ನಿ ಹಾಸಿನಿ, ಆಕೆಯ ಪ್ರಿಯಕರ ಯುಗಂಧರ್‌ ಸೇರಿ ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎರಡು ವರ್ಷಗಳ ಹಿಂದೆ ಹಾಸಿಗೆ ತಮಿಳುನಾಡಿನ ರಮೇಶ್‌ ಜೊತೆ ಮದುವೆಯಾಗಿತ್ತು. ರಮೇಶ್‌ ಹೊಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ದಂಪತಿಗೆ ಒಂದು ವರ್ಷದ ಹೆಣ್ಣು ಮಗಳಿದ್ದಾಳೆ. ರಮೇಶ್‌ ಹೆಂಡತಿ ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ ಹಾಸಿನಿ ಮದುವೆಯ ನಂತರವೂ ತನ್ನ ಬಾಲ್ಯದ ಗೆಳೆಯ ಯುಗಂಧರ್‌ ಎನ್ನುವ ಯುವಕನ ಜೊತೆ ಸಂಬಂಧವನ್ನು ಮುಂದುವರೆಸಿದ್ದಳು. ಇತ್ತೀಚೆಗೆ ತನ್ನ ತಾಯಿಯ ಮನೆಗೆ ಬಂದಿದ್ದ ಹಾಸಿನಿ, ಗಂಡನ ಅಡಚಣೆಯನ್ನು ಶಾಶ್ವತವಾಗಿ ನಿವಾರಿಸಲು ಪ್ರಿಯಕರನ ಜೊತೆ ಸೇರಿ ಮಾಸ್ಟರ್‌ ಪ್ಲಾನ್‌ ಮಾಡಿದ್ದಳು.

ಹಾಸಿನಿ ತನ್ನ ಪತಿ ರಮೇಶ್‌ನನ್ನು ಮಲ್ಲಪ್ಪ ಬೆಟ್ಟದ ಮೇಲಿರುವ ಮಲ್ಲೇಶ್ವರ ಸ್ವಾಮಿ ದರ್ಶನಕ್ಕೆ ಹೋಗೋಣ ಎಂದು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದು, ಇವರ ಜೊತೆ ಒಂದು ವರ್ಷದ ಮಗು ಕೂಡಾ ಇತ್ತು. ಬೈಕ್‌ನಲ್ಲಿ ಹೋಗುವಾಗ ಹಾಸಿನಿ ಕಾಲಕಾಲಕ್ಕೆ ತನ್ನ ಪ್ರಿಯಕರ ಯುಗಂಧರ್‌ಗೆ ಫೋನ್‌ ಮೂಲಕ ತಾವಿರುವ ಜಾಗದ ಮಾಹಿತಿ ನೀಡುತ್ತಿದ್ದಳು.

banner

ಮಲ್ಲಪ್ಪ ಬೆಟ್ಟವನ್ನು ಹತ್ತುವಾಗ ಮೂರನೇ ತಿರುವಿನಲ್ಲಿ ಹಾಸಿನಿ ತನ್ನ ಕೈಯಲ್ಲಿದ್ದ ಪರ್ಸ್‌ನ್ನು ಉದ್ದೇಶಪೂರ್ವಕವಾಗಿ ಕೆಳಗೆ ಬೀಳಿಸಿದ್ದು, ಪರ್ಸ್‌ ಬಿದ್ದಿದ್ದನ್ನು ನೋಡಿ ರಮೇಶ್‌ ಬೈಕ್‌ ನಿಲ್ಲಿಸಿ ಅದನ್ನು ಎತ್ತಿಕೊಳ್ಳಲು ಹೋಗಿದ್ದಾನೆ. ಆಗ ಇದನ್ನೇ ಕಾಯುತ್ತಿದ್ದ ಯುಗಂಧರ್‌ ಮತ್ತು ಆತನ ನಾಲ್ವರು ಸಪ್ಲೈಯರ್ಸ್‌ ರಮೇಶ್‌ನನ್ನು ಬಲವಂತವಾಗಿ ಹಿಡಿದು ಪಕ್ಕದ ದಟ್ಟ ಅರಣು ಪ್ರದೇಶಕ್ಕೆ ಎಳೆದೊಯ್ದು, ಬೀಕರವಾಗಿ ಹತ್ಯೆ ಮಾಡಿ ಶವವನ್ನು ಕಾಡಿನಲ್ಲಿ ಎಸೆದಿದ್ದಾರೆ.

ನಂತರ ಹಾಸಿನಿ ತನ್ನ ಮಗುವಿನ ಜೊತೆ ಗಂಡನ ಬೈಕ್‌ನಲ್ಲೇ ಪ್ರಿಯಕರ ಯುಗಂಧರ್‌ ಜೊತೆ ಕುಳಿತು ರೈಲು ನಿಲ್ದಾಣ ತಲುಪಿ ಅಲ್ಲಿಂದ ಪರಾರಿಯಾಗಿದ್ದಾಳೆ.

ರಮೇಶ್‌ ಕುಟುಂಬ ದೇವಸ್ಥಾನ ದರ್ಶನ್ಕೆ ಹೋದವರು ಮರಳಿ ಬಾರದಿದ್ದಾಗ, ಹಾಸಿನಿಯ ತಾಯಿ ತನ್ನ ಮಗಳು ಮತ್ತು ಮೊಮ್ಮಗಳು ಕಾಣೆಯಾಗಿದ್ದಾರೆ ಎಂದು ರಲ್ಲಾ ಬೂದುಗುರು ಪೊಲೀಸ್‌ ಠಾಣೆಗೆ ದೂರು ದಾಖಲು ಮಾಡಿದ್ದಾರೆ. ಪ್ರಕರಣ ದಾಖಲು ಮಾಡಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಿದಾಗ ಅಸಲಿ ಸತ್ಯ ಬಯಲಾಗಿದೆ.

ಕೂಡಲೇ ಪೊಲೀಸರು ಕಾಡಿನಲ್ಲಿದ್ದ ರಮೇಶ್‌ ಶವವನ್ನು ವಶಪಡಿಸಿಕೊಂಡು, ಪಲಾಯನ ಮಾಡಿದ್ದ ಹಂತಕರನ್ನು ಬಂಧನ ಮಾಡಿದ್ದಾರೆ.

You may also like