ಅಯೋಧ್ಯೆ ನಮ್ದಾಯ್ತು; ಇನ್ನೂ ಕಾಶಿ, ಮಥುರಾ ಮತ್ತು ಈಗ ಜ್ಞಾನವಾಪಿ ಕೂಡಾ ನಮ್ಮದಾಗುತ್ತೆ – ಕೆ.ಎಸ್ ಈಶ್ವರಪ್ಪ ಹೇಳಿಕೆ
ನಮ್ಮ ಹಿಂದೂ ಶ್ರದ್ಧಾ ಕೇಂದ್ರಗಳ ಅತಿಕ್ರಮಣ ಇನ್ನು ಅಸಾಧ್ಯ. ಈಗಾಗಲೇ ಅಯೋಧ್ಯೆ ನಮ್ಮದಾಗಿದೆ. ಕಾಶಿಯಲ್ಲೂ ಪುರಾತನ ದೇವಾಲಯದ ಕುರುಹು ಪತ್ತೆಯಾಗಿದೆ. ಮುಂದಿನ ದಿನಗಳಲ್ಲಿ ಮಥುರಾ ಕೂಡ ನಮ್ಮದಾಗಲಿದೆ ಎಂದು ಬಿಜೆಪಿಯ ಹಿರಿಯ ನಾಯಕ, ಮಾಜಿ ಮಂತ್ರಿ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ಸುದೀರ್ಘ ಹೋರಾಟದ ಬಳಿಕ ಅಯೋಧ್ಯೆ ಮರಳಿ ಕೈ ಸೇರಿತು. ಕಾಶಿಯಲ್ಲಿ ಈಗ ಕಾನೂನು ಹೋರಾಟ ಬಿರುಸಾಗಿ ಆರಂಭವಾಗಿದೆ. ಇನ್ನು ಹಿಂದೂ ಧಮೀರ್ಯರ ಶ್ರದ್ಧಾ ಕೇಂದ್ರಗಳನ್ನು ಅತಿಕ್ರಮಣ ಮಾಡಲು ಸಾಧ್ಯವಿಲ್ಲ. ಈಗ …