ವಿಶ್ವವೇ ಲಾಕ್ ಡೌನ್ನಲ್ಲಿ ಇದ್ದರು ಅಮರ ಸಂಘಟನೆಯಿಂದ ವಿಶೇಷ ಕಾರ್ಯಕ್ರಮ

ಸುಳ್ಯ : ಎಲ್ಲಾ ವಿಶೇಷ ಕಾರ್ಯಕ್ರಮಗಳಿಗೆ ಒಂದೊಂದು ದಿನ ಇರುತ್ತದೆ ಅದೇ ರೀತಿ ಇವತ್ತು ವಿಶ್ವ ಭೂದಿನ ವಾಗಿದೆ. ಎಲ್ಲಾ ವಿಶೇಷ ಕಾರ್ಯಕ್ರಮವನ್ನು ಹಲವು ರೀತಿಯಲ್ಲಿ ಆಚರಣೆ ಮಾಡುತ್ತೇವೆ, ಆದರೆ ವಿಶ್ವವನ್ನು ತನ್ನ ಸ್ವಾಧೀನಕ್ಕೆ ತೆಗೆದು ಕೊಂಡ ಕೊರೊನ ವೈರಸ್ ನಿಂದ ಎಲ್ಲಾ ಕಾರ್ಯಕ್ರಮ ವನ್ನು ಮನೆಯಲ್ಲಿಯೇ ಇದ್ದು ಆಚರಣೆ ಮಾಡುವಂತಾಗಿದೆ. ಹಾಗಾಗಿ ಇಂತಹ ಕಾರ್ಯಕ್ರಮವನ್ನು ಗುರುತಿಸಲು ಅಮರ ಸಂಘಟನಾ ಸಮಿತಿ ಅಮರ ಮುಡ್ನೂರು ಮತ್ತು ಪಡ್ನೂರು ಮನೆಯಲ್ಲಿಯೇ ಗಿಡ ನೆಟ್ಟು ಸೆಲ್ಫಿ ಕಳುಹಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.

ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿರುವ ಅಮರ ಸಂಘಟನೆ ಈಗ ವಿಶಿಷ್ಟ ಅಭಿಯಾನವನ್ನು ಕೈಗೊಂಡಿದೆ.
ವಿಶ್ವ ಭೂಮಿ ದಿನಾಚರಣೆಯ ಅಂಗವಾಗಿ ಇಂದು Save tree save ಲೈಫ್ ಅಭಿಯಾನದಡಿಯಲ್ಲಿ
ಲಾಕ್ ಡೌನ್ ನಿಯಮದ ಚೌಕಟ್ಟಿನ ಒಳಗಡೆ ಮನೆಯಲ್ಲಿಯೇ ಗಿಡ ನೆಟ್ಟು ಸೆಲ್ಫಿ ಕಳುಹಿಸುವ ವಿಶಿಷ್ಟ ಯೋಜನೆಯನ್ನು ಹಮ್ಮಿಕೊಳ್ಳಾಲಾಗಿದ್ದು ಉತ್ತಮ ರೀತಿಯ ಸಹಕಾರ ಬರುತಿದೆ. ಕೇವಲ ಗಿಡ ನೆಡುವುದು ಮಾತ್ರವಲ್ಲದೇ ಅದರ ನಿರ್ವಹಣೆಯ ಸೆಲ್ಫಿಯನ್ನು ಕೂಡ ಮುಂದಿನ ದಿನಗಳಲ್ಲಿ ಸಂಗ್ರಹಿಸಲಾಗುವುದು. ಈ ಒಂದು ಅಭಿಯಾನದಡಿಯಲ್ಲಿ ಮುಂದಿನ ಜೂನ್ ತಿಂಗಳ ಒಳಗಾಗಿ ತಾಲೂಕಿನಾದ್ಯಾಂತ ಸಾವಿರಕ್ಕು ಅಧಿಕ ಗಿಡಗಳನ್ನು ನೆಟ್ಟು ಪೊಷಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಮರ ಸಂಘಟನೆ ತಿಳಿಸಿದೆ

ಗಿಡ ನೆಟ್ಟು ಸೆಲ್ಫಿ ಕಳುಹಿಸಿದವರು:

Leave A Reply

Your email address will not be published.