ಸುಳ್ಯ | ಬಾವಿಗೆ ಆಕಸ್ಮಿಕವಾಗಿ ಬಿದ್ದು ವಿನೀತ್ ರೈ ದುರ್ಮರಣ

ಹೊಸ ಬಾವಿಯೊಂದಕ್ಕೆ ಯುವಕನೊಬ್ಬ ಆಕಸ್ಮಿಕವಾಗಿ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆಯಿಂದ ವರದಿಯಾಗಿದೆ.

ನೆಲ್ಲೂರು ಕೆಮ್ರಾಜೆ ಗ್ರಾಮದ ಅಲ್ಪೆ ಗಣೇಶ್ ರೈ ಎಂಬವರು ತನ್ನ ಮನೆ ಎದುರು ಹೊಸ ಬಾವಿ ತೆಗೆಯುತ್ತಿದ್ದರು. ಮಾ.30ರಂದು ಸಂಜೆ ಬಾವಿಯ ಕೆಲಸ ಕೆಲಸ ಮುಗಿಸಿ ಎಲ್ಲರೂ ತೆರಳಿದ್ದರು.

ಆ ಬಳಿಕ ಗಣೇಶ್ ರೈ ಅವರ ಪುತ್ರ ವಿನೀತ್ ರೈ ಬಾವಿಯಿಂದ ಮಣ್ಣು ತೆಗೆಯಲು ಕಟ್ಟಿದ್ದ ರಾಟೆ ಹಿಡಿದುಕೊಂಡು ಬಾವಿಯನ್ನು ನೋಡುತ್ತಿದ್ದ ವೇಳೆ ಆಕಸ್ಮಿಕ ವಾಗಿ ಬಾವಿಯೊಳಕ್ಕೆ ಬಿದ್ದ ರಭಸಕ್ಕೆ ವಿನೀತ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟರೆನ್ನಲಾಗಿದೆ.

ಮೃತರು ತಂದೆ, ತಾಯಿ ಶಾಂತಮ್ಮ, ಸಹೋದರಿ ಶ್ರೇಯಾ ಅವರನ್ನು ಅಗಲಿದ್ದಾರೆ.

ಕೊರೋನಾ ಸಂಕಟ ಮುಗಿದು ನೆಮ್ಮದಿ ಮೂಡುವ ದಿನ ಗೊತ್ತಾ ? ಇಲ್ಲಿದೆ ನೋಡಿ !

Leave A Reply

Your email address will not be published.