ಪುತ್ತೂರು: ಹೃದಯಾಘಾತದಿಂದ ಚಿನ್ನದ ಕುಶಲಕರ್ಮಿ, ಹಿಂಜಾವೇ ಮಾಜಿ ಸಂಚಾಲಕ ಭಾಸ್ಕರ್‌ ಆಚಾರ್ಯ ನಿಧನ

0 comments

ಪುತ್ತೂರು: ಕೂರ್ನಡ್ಕ ಮುದಕದ ಆರಾಧ್ಯ ಲೇಔಟ್‌ ನಿವಾಸಿ, ಚಿನ್ನದ ಕಸೂತಿ ಕೆಲಸಗಾರ ಹಾಗೂ ಹಿಂದೂ ಜಾಗರಣ ವೇದಿಕೆಯ ಪುತ್ತೂರು ನಗರದ ಮಾಜಿ ಸಂಚಾಲಕ ಭಾಸ್ಕರ್‌ ಆಚಾರ್ಯ (35) ಭಾನುವಾರ (ಮೇ 31) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಮೂಲತಃ ನಿಡ್ಪಳ್ಳಿ ನಿವಾಸಿ ಭಾಸ್ಕರ್‌ ಆಚಾರ್ಯ ಅವರಿಗೆ ಬೆಳಿಗ್ಗಿನ ಸಮಯದಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳಿದಿರುವುದಾಗಿ ವರದಿಯಾಗಿದೆ.

ಮೃತರು ಪತ್ನಿ ರಕ್ಷಿತಾ, ತಾಯಿ ಸುನಂದಾ, ಓರ್ವ ಸಹೋದರ ಹಾಗೂ ಮೂವರು ಸಹೋದರಿಯರನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

You may also like