ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್ ಅವರು ಅಧಿಕಾರ ವಹಿಸಿಕೊಳ್ಳುವ ಅದ್ಧೂರಿ ಕಾರ್ಯಕ್ರಮದಲ್ಲಿ ಹೈಡ್ರಾಮ ನಡೆದಿದೆ. ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಲು ನಿಲ್ಲುತ್ತಿದ್ದತೆ, ಇತ್ತ ಕೆಳಗಡೆ ಕುಳಿತಿದ್ದ ಡಿ.ಕೆ.ಶಿವಕುಮಾರ್ ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಜೋರಾಗಿ ಡಿಕೆ ಡಿಕೆ ಎಂದು ಜೈಕಾರ ಕೂಗುತ್ತಾ ಗದ್ದಲ ಮಾಡಿದರು. ಅಭಿಮಾನಿಗಳ ಈ ವರ್ತನೆಗೆ ಖರ್ಗೆ ಅವರು ವೇದಿಕೆಯಲ್ಲಿಯೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ.


ಮೊದಲು ಸುಮ್ಮನೆ ಕುತ್ಕೊಳ್ಳಿ, ನಿಮಗೆ ಅಷ್ಟು ಕನಿಷ್ಠ ಜ್ಞಾನ ಇಲ್ವ? ನಾನ್ಸೆನ್ಸ್ ಫೆಲೋಸ್ ಎಂದು ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡರು. ಮುಂದುವರಿದ ಅವರು ” ಇದು ಯಾವುದೇ ಒಬ್ಬ ವ್ಯಕ್ತಿಯ ಕಾರ್ಯಕ್ರಮವಲ್ಲ. ಇದು ಪಕ್ಷದ ಕಾರ್ಯಕ್ರಮ. ಎಲ್ಲರೂ ಸೇರಿ ಪಕ್ಷವನ್ನು ಒಗ್ಗೂಡಿಸಲು ಹಮ್ಮಿಕೊಂಡಿರುವ ವೇದಿಕೆ ಇದು. ಇಂತಹ ಕಾರ್ಯಕ್ರಮದಲ್ಲಿ ಯಾರೋ ಒಬ್ಬರನ್ನು ಮಾತ್ರ ಇಷ್ಟೊಂದು ಮೇಲೆತ್ತು ಕೂಗುವುದು ತಪ್ಪು. ಒಬ್ಬರ ಹೆಸರನ್ನು ಕೂಗುವುದು ಸರಿಯಲ್ಲಿ. ಹಾಗಾದರೆ ಇಲ್ಲಿ ಬಂದಿರುವ ಉಳಿದವರೆಲ್ಲ ಕಸ ಗುಡಿಸೋಕೆ ಬಂದಿದ್ದಾರಾ? ಎಂದು ಖಾರವಾಗಿ ಗುಡುಗಿದರು.
