ರಾಜ್ಯದ ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಅವರು RSS ನೋಂದಣಿ ಆಗಿರುವ ಬಗ್ಗೆ ನಿರಂತರವಾಗಿ ಪ್ರಶ್ನೆ ಮಾಡುತ್ತಾ ಇತ್ತೀಚೆಗೆ ಅದರ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದರು. ಆದರೆ ಇದೀಗ ಅವರು ಆರ್ ಎಸ್ ಎಸ್ ಬಳಿ ನಾನು ಕ್ಷಮೆ ಕೇಳುವೆ, ಆದರೆ ಅವರು ಕೊಡುವ ಉತ್ತರಗಳು ಸಮಂಜಸವಾಗಿರಬೇಕು ಎಂದು ಹೇಳಿದ್ದಾರೆ.


ಹೌದು, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ರಾಜ್ಯದ ಗೃಹಸಚಿವನಾಗಿ ನಾನು ಅಧಿಕೃತವಾಗಿ ಪತ್ರ ಬರೆದು ಏಳೆಂಟು ಪ್ರಶ್ನೆಗಳನ್ನು ಕೇಳಿದ್ದೇನೆ. ಉತ್ತರ ಕೊಡಲಿ. ಸಮಾಧಾನ ಆಗದಿದ್ದರೆ, ನಾನೇ ಕೇಶವಕೃಪಕ್ಕೆ ಬಂದು ಚರ್ಚಿಸುತ್ತೇನೆ. ಉತ್ತರಗಳು ಸಮಂಜಸವಾಗಿದ್ದರೆ ಕ್ಷಮೆಯನ್ನೂ ಕೇಳುತ್ತೇನೆ ಎಂದು ಗೃಹಸಚಿವ ಪ್ರಿಯಾಂಕ್ ಖರ್ಗೆ ಮತ್ತೊಂದು ಸವಾಲು ಹಾಕಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಪತ್ರದಲ್ಲಿ ಪ್ರಸ್ತಾಪಿಸಿರುವ ಅವರ ಶಾಖೆ, ಮಿಲನ್, ಸಮಾಜೋತ್ಸವ ಇತ್ಯಾದಿಗಳಲ್ಲಿ ಭಾಗಿಯಾಗುವವರ ಸಂಖ್ಯೆಗಳು ಗುಪ್ತಚರ ಅಥವಾ ಗೃಹ ಇಲಾಖೆಯದ್ದಲ್ಲ. ಅವರದ್ದೇ ಅಂಕಿ-ಅಂಶಗಳು. ಅಷ್ಟೆಲ್ಲ ಜನ ಸೇರಿದಾಗ ಭದ್ರತೆ ಕೊಡುವುದು ನನ್ನದೇ ಇಲಾಖೆ. ಹೀಗಾಗಿ ನನಗೆ ಗೊತ್ತಾಗಬೇಕಲ್ಲವೇ ಎಂದರು.
ನನ್ನ ಪ್ರಶ್ನೆಗಳಿಗೆ ಉತ್ತರಿಸಲುನನ್ನ ಕಚೇರಿಗೇ ಬನ್ನಿ ಅಥವಾ ಪತ್ರದ ಮೂಲಕವೇ ಉತ್ತರಿಸಿ. ಜಾಲತಾಣದಲ್ಲಿ ಚರ್ಚಿಸುವುದು, ಯಾರೋ ವಕೀಲರ ಮೂಲಕ ಲೇಖನಗಳನ್ನು ಬರೆಸುವುದಲ್ಲ. ನೀವು ಕೊಟ್ಟ ಉತ್ತರ ಸಮಂಜಸ ಇದ್ದರೆ ನಾನೇ ಕ್ಷಮೆ ಕೇಳುತ್ತೇನೆ. ಇಲ್ಲದಿದ್ದರೆ ಕೇಶವಕೃಪದಲ್ಲಿ ಒಳ್ಳೆಯ ಕಾಫಿ ಸಿಗುವುದಾದರೆ ಅಲ್ಲಿಗೇ ಬಂದು ಚರ್ಚಿಸಲು ಸಿದ್ಧನಿದ್ದೇನೆ. ಬೇಕಿದ್ದರೆ ನನ್ನ ಕಾಫಿಯನ್ನು ನಾನೇ ತರುತ್ತೇನೆ ವ್ಯಂಗ್ಯವಾಡಿದ್ದಾರೆ.

