Home » ಉಳ್ಳಾಲ ಮಸೀದಿ ಬಳಿ ಬಾಂಬ್‌ ಸ್ಫೋಟ ಮಾಡುತ್ತೇನೆ ಪ್ರಚೋದನಕಾರಿ ಕಮೆಂಟ್‌: ಕೇಸು ದಾಖಲು

ಉಳ್ಳಾಲ ಮಸೀದಿ ಬಳಿ ಬಾಂಬ್‌ ಸ್ಫೋಟ ಮಾಡುತ್ತೇನೆ ಪ್ರಚೋದನಕಾರಿ ಕಮೆಂಟ್‌: ಕೇಸು ದಾಖಲು

0 comments
Instagram

ಉಳ್ಳಾಲ: ಉಳ್ಳಾಲದ ಮಸೀದಿ ಬಳಿ ಬಾಂಬ್‌ ಸ್ಫೋಟಿಸುತ್ತೇನೆ, ಸಪೋರ್ಟ್‌ ಮಾಡಿ ಎಂದು ಬಜ್ಪೆಯಲ್ಲಿ ಕೊಲೆಯಾಗಿದ್ದ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಭಾವಚಿತ್ರವುಳ್ಳ ಇನ್ಸ್‌ಟಾಗ್ರಾಮ್‌ ಪೇಜ್‌ ಒಂದರಲ್ಲಿ ಪೋಸ್ಟ್‌ ಮಾಡಿರುವ ಕಿಡಿಗೇಡಿಯ ವಿರುದ್ಧ ಉಳ್ಳಾಲ ಪೊಲೀಸರು ಸುಮೊಟೋ ಕೇಸು ದಾಖಲು ಮಾಡಿದ್ದಾರೆ.

shankar11916 ಎಂಬ ಇನ್ಸ್ಟಾ ಖಾತೆಯಿಂದ ʼಸಪೋರ್ಟ್‌ ಮಾಡಿ ಬ್ರೋ ಉಳ್ಳಾಲ ಮಸ್ಜಿದ್‌ ಹತ್ರ ಬಾಂಬ್‌ ಬ್ಲಾಸ್ಟ್‌ ಮಾಡ್ತೀನಿʼ ಎಂಬ ಪ್ರಚೋದನಕಾರಿ ಸಂದೇಶವನ್ನು ಹಾಕಲಾಗಿದ್ದು, ಇದು ವೈರಲ್‌ ಆಗಿತ್ತು.

ಸೋಮವಾರ ಸಾಮಾಜಿಕ ಜಾಲತಾಣದ ಮೋನಿಟರಿಂಗ್‌ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಉಳ್ಳಾಲ ಪೊಲೀಸ್‌ ಠಾಣಾ ಸಿಬ್ಬಂದಿ ಸಂತೋಷ್‌ ದೊಡ್ಡಮನಿ ಅವರು ಈ ಸಂದೇಶವನ್ನು ಗಮನಿಸಿದ್ದು, ಈ ಕುರಿತು ದೂರು ನೀಡಿದ್ದು, ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯು ಧರ್ಮ ಧರ್ಮಗಳ ಮಧ್ಯೆ ವೈರತ್ವ ಉಂಟು ಮಾಡಿ ಹಿಂಸೆಗೆ ಪ್ರಚೋದಿಸಿ ಜನರನ್ನು ಎತ್ತಿ ಕಟ್ಟುವಂತೆ ಮಾಡುವ ಉದ್ದೇಶದಿಂದ ಪ್ರಚೋದನಕಾರಿ ಕಮೆಂಟ್‌ ಮಾಡಿದ್ದು, ಕಾನೂನಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

banner

ಕಮಿಷನರ್‌ ಸುಧೀರ್‌ ರೆಡ್ಡಿ ಅವರು ಪೋಸ್ಟ್‌ ಮಾಡಿರುವ ವ್ಯಕ್ತಿಯನ್ನು ಅರೆಸ್ಟ್‌ ಮಾಡುವುದಾಗಿ ಹೇಳಿರುವ ಕುರಿತು ವರದಿಯಾಗಿದೆ.

You may also like