ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು ಇಂದು ಬೆಳ್ಳಂಬೆಳಗ್ಗೆ ಆಂಜನೇಯನ ಮೊರೆ ಹೋಗಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಆಂಜನೇಯನ ನೆನಪು ಬಂತಾ ಎಂದು ನೆಟ್ಟಿಗರು ಈ ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ.


ಇಂದು ಬೆಳಗ್ಗೆ ಎಕ್ಸ್ ಖಾತೆಯಲ್ಲಿ ಪವನಪುತ್ರ ಮಾರುತಿಯ ಫೋಟೋವನ್ನು ಅಖಿಲೇಶ್ ಯಾದವ್ ಹಂಚಿಕೊಂಡಿದ್ದಾರೆ. ಈ ಫೋಟೋ ಮೇಲೆ ನಿನ್ನಲ್ಲಿ ಆಶ್ರಯ ಪಡೆಯೋದರಿಂದ ಎಲ್ಲ ಸಂತೋಷಗಳು ಸಿಗುತ್ತವೆ. ನಿನ್ನ ರಕ್ಷಣೆಯಿದ್ರೆ ಯಾರಿಗೂ ಯಾವ ಭಯವಿರಲ್ಲ. ಬಜರಂಗಬಲಿಯೂ ಮನಸ್ಸಿನಲ್ಲಿರುವ ತೊಂದರೆಗಳನ್ನು ಮುಕ್ತಗೊಳಿಸಲಿದ್ದಾನೆ ಎಂದು ಬರೆಯಲಾಗಿದೆ.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು, ಈಗಾಗಲೇ ಉತ್ತರ ಪ್ರದೇಶದಲ್ಲಿ ಪಕ್ಷದ ಚಟುವಟಿಕೆ ಪ್ರಾರಂಭವಾಗಿದೆ.
ದೀದಿ ಸೋತ ತಕ್ಷಣ, ಇವರಿಗೆ ದೇವರು ನೆನಪಿಗೆ ಬಂದಿದ್ದಾನೆ. ಇಂತವರ ಕುರಿತು ಏನು ಹೇಳೋಣ? ದುಃಖ ಅಥವಾ ಕಷ್ಟದಲ್ಲಿದ್ದಾಗಲೇ ಎಲ್ಲರೂ ದೇವರನ್ನು ನೆನಪು ಮಾಡುತ್ತಾರೆ. ಖುಷಿಯಲ್ಲಿದ್ದಾಗ ಯಾರಿಗೂ ದೇವರು ನೆನಪಿಗೆ ಬರುವುದಿಲ್ಲ. ಸಂತೋಷದಲ್ಲಿದ್ದಾಗ ದೇವರನ್ನು ನೆನಪಿಸಿಕೊಂಡರೆ ದುಃಖ ಏಕೆ ಬರುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.

