ಭಾರತ ಸರ್ಕಾರವು ಜನರಲ್ ಧೀರಜ್ ಸೇಠ್ಅವರನ್ನು ಭಾರತೀಯ ಸೇನೆಯ ಮುಂದಿನ ಮುಖ್ಯಸ್ಥರಾಗಿ ನೇಮಕ ಮಾಡಿದೆ. ಪ್ರಸ್ತುತ ಉಪ ಸೇನಾ ಮುಖ್ಯಸ್ಥರಾಗಿದ್ದರು.


ಸೇನಾಪಡೆಗಳ ಮುಖ್ಯಸ್ಥರಾಗಿರುವ ಉಪೇಂದ್ರ ದ್ವಿವೇದಿ ಅವರು ಜೂನ್ 30ರಂದು ನಿವೃತ್ತರಾಗಲಿದ್ದು, ಅವರ ಸ್ಥಾನದಲ್ಲಿ ಧೀರಜ್ ಮುಂದುವರಿಯಲಿದ್ದಾರೆ. ‘ಜನರಲ್ ಉಪೇಂದ್ರ ದ್ವಿವೇದಿ ಅವರು 2026ರ ಜೂನ್ 30ರಂದು ನಿವೃತ್ತರಾದ ನಂತರ ಧೀರಜ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ’ ಎಂದು ರಕ್ಷಣಾ ಸಚಿವಾಲಯ ಶನಿವಾರ ಹೇಳಿಕೆ ಬಿಡುಗಡೆ ಮಾಡಿದೆ.
ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದ ಆದೇಶದ ಪ್ರಕಾರ, ರಾಷ್ಟ್ರಪತಿಗಳು ಲೆ. ಜನರಲ್ ಧೀರಜ್ ಸೇಠ್ ಅವರ ನೇಮಕಾತಿಗೆ ಅನುಮೋದನೆ ನೀಡಿದ್ದಾರೆ. ಅವರು ಪೂರ್ಣ ಜನರಲ್ ಹುದ್ದೆಯಲ್ಲಿ ಜೂನ್ 30ರಿಂದ ಅಧಿಕಾರ ಸ್ವೀಕರಿಸಲಿದ್ದು, ಆಗಸ್ಟ್ 31, 2028ರವರೆಗೆ ಸೇವಾವಧಿ ಹೊಂದಿರುತ್ತಾರೆ.
ಜನರಲ್ ಧೀರಜ್ ಸೇಠ್ ಯಾರು?
ಖಡಕ್ವಾಸ್ಲಾ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (Khadakwasla Defence Academy) ಹಳೆಯ ವಿದ್ಯಾರ್ಥಿಯಾಗಿರುವ ಧೀರಜ್ ಸೇಠ್ ಅವರು 1986 ರ ಡಿಸೆಂಬರ್ ನಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದರು. 4 ದಶಕಗಳ ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಹಾಗೂ ವೈವಿಧ್ಯಮಯ ಭೂ ಪ್ರದೇಶ, ಸಂಘರ್ಷ ಪರಿಸರಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. 1997 ರಲ್ಲಿ ಆರ್ಮರ್ಡ್ ಕಾರ್ಪ್ಸ್ನ 20ನೇ ಲ್ಯಾನ್ಸರ್ಸ್ನಲ್ಲಿ (ಸೈನಿಕ ವಿಭಾಗ) ಸೇವೆ ಸಲ್ಲಿಸಿದ್ದ ಜನರಲ್ ಶಂಕರ್ ರಾಯ್ ಚೌಧರಿ ಅವರ ಬಳಿಕ ಸೇನಾ ಮುಖ್ಯಸ್ಥರಾದ ಮೊದಲ ಆರ್ಮರ್ಡ್ ಕಾರ್ಪ್ಸ್ ನ ಅಧಿಕಾರಿ ಎಂಬ ಹೆಗ್ಗಳಿಕೆಗೂ ಸೇಠ್ ಪಾತ್ರರಾಗಿದ್ದಾರೆ.

