Home » ಕಾಂಗ್ರೆಸ್ ಜೊತೆ ದೇಶದ ಪ್ರಮುಖ ವಿಪಕ್ಷಗಳ ವಿಲೀನ?!

ಕಾಂಗ್ರೆಸ್ ಜೊತೆ ದೇಶದ ಪ್ರಮುಖ ವಿಪಕ್ಷಗಳ ವಿಲೀನ?!

0 comments

ಕಳೆದ ಸೋಮವಾರ (ಜೂನ್ 9) ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಸಭೆ ನಡೆದಿತ್ತು. ಡಿಎಂಕೆ, ಆಮ್ ಆದ್ಮಿ ಪಾರ್ಟಿಯ ಬಹಿಷ್ಕಾರದ ಮಧ್ಯೆಯೂ ಸಭೆಯು ಅತ್ಯಂತ ಯಶಸ್ವಿಯಾಗಿ ನೆರವೇರಿತ್ತು. ಅಚ್ಚರಿ ಅಂದ್ರೆ ಕಾಂಗ್ರೆಸ್ ಅನ್ನು ಕಟುವಾಗಿ ಟೀಕಿಸುತ್ತಿದ್ದ ಮಮತಾ ಬ್ಯಾನರ್ಜಿ ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಕೆಲವು ಪ್ರಮುಖ ಪಕ್ಷದ ನಾಯಕರು ಮಹತ್ವದ ನಿರ್ಣಯ ಒಂದನ್ನು ಕೈಗೊಂಡಿದ್ದು ಸದ್ಯದಲ್ಲೇ ದೇಶದ ಪ್ರಮುಖ ವಿಪಕ್ಷಗಳು ಕಾಂಗ್ರೆಸ್ ಜೊತೆ ವಿಲೀನವಾಗಲು ನಿರ್ಧರಿಸಿದೆ ಎಂದು ವರದಿಯಾಗಿದೆ. 

ಹೌದು, ದಶಕಗಳ ಹಿಂದೆ ಮಾತೃ ಸಂಸ್ಥೆಯಿಂದ ದೂರವಾಗಿದ್ದ ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸಿ ಮತ್ತೆ ‘ಅಖಂಡ ಕಾಂಗ್ರೆಸ್’ ಸ್ಥಾಪಿಸುವ ಕುರಿತು INDIA ಒಕ್ಕೂಟದ ನಾಯಕರ ನಡುವೆ ಗಂಭೀರ ಮಾತುಕತೆಗಳು ಆರಂಭವಾಗಿವೆ ಎಂಬ ಗುಸು ಗುಸು ಒಂದು ಈಗ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆದ ಬಳಿಕ ಅಲ್ಲಿ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆ ತೃಣಮೂಲ ಕಾಂಗ್ರೆಸ್ ಈಗ ಛಿದ್ರ ಛಿದ್ರವಾಗುತ್ತಿದೆ. ಈ ಬೆನ್ನಲೇ ವಿಲೀನ ಚರ್ಚೆ ಮುನ್ನೆಲೆಗೆ ಬಂದಿದ್ದು, ಟಿಎಂಸಿ ಹಾಗೂ ಮಹಾರಾಷ್ಟ್ರದ ಶರದ್ ಪವಾರ್(Sharad Pawar) ನೇತೃತ್ವದ ಎನ್‌ಸಿಪಿ(NCP) ಪಕ್ಷಗಳು ಕಾಂಗ್ರೆಸ್‌ನಲ್ಲಿ (Congress) ವಿಲೀನವಾಗಲಿವೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಈ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಹಾಗೂ ಶರದ್ ಪವಾರ್ ಅವರು ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ನಿರಂತರ ಮಾತುಕತೆಯಲ್ಲಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಲೆ ನೀಡಿರುವ ಹೇಳಿಕೆ ಈ ಎಲ್ಲಾ ಚರ್ಚೆಗಳಿಗೆ ತುಪ್ಪ ಸುರಿದಿದೆ. ಇದಕ್ಕೂ ಮುನ್ನ, ಶಿವಸೇನೆ ಉದ್ಧವ್ ಬಣ ನಾಯಕ ಸಂಜಯ್ ರಾವತ್ ಕೂಡ, “ದಶಕಗಳ ಹಿಂದೆ ಕಾಂಗ್ರೆಸ್‌ನಿಂದ ಬೇರ್ಪಟ್ಟಿದ್ದ ಪ್ರಾದೇಶಿಕ ಪಕ್ಷಗಳು ಮತ್ತೆ ಮಾತೃ ಪಕ್ಷವನ್ನು ಸೇರುವುದು ದೇಶದ ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ ನಿರ್ಧಾರ” ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಇದು ಗಾಳಿ ಸುದ್ದಿಯೋ ಅಥವಾ ಭವಿಷ್ಯದಲ್ಲಿ ಅಖಂಡ ಕಾಂಗ್ರೆಸ್ ಸ್ಥಾಪನೆಯ ಆರಂಭವೋ ಎಂದು ಇನ್ನಷ್ಟೇ ತಿಳಿಯಬೇಕಿದೆ.

banner

You may also like