Shraddha Case: ಶ್ರದ್ಧಾ ಕೊಲೆ ಕೇಸ್ ಪ್ರಕರಣ; ಆರೋಪಿ ಅಫ್ತಾಬ್ಗೆ ಒಂಟಿ ಕೋಣೆಯಿಂದ ಮುಕ್ತಿ
![Shraddha Case](https://hosakannada.com/wp-content/uploads/2024/03/IMG-20240316-WA0003.jpg)
Delhi Shraddha Murder Case: ದೇಶದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮಿನ್ ಪೂನಾವಾಲನನ್ನು ದಿನಕ್ಕೆ ಎಂಟು ಗಂಟೆಗಳ ಕಾಲ ಇತರ ಕೈದಿಗಳ ಜೊತೆ ಬಿಡಬೇಕೆಂದು ದಿಲ್ಲಿ ಹೈಕೋರ್ಟ್ ಶುಕ್ರವಾರ ಆದೇಶ ಮಾಡಿದೆ.
![](https://hosakannada.com/wp-content/uploads/2024/07/First.jpeg)
ಇದನ್ನೂ ಓದಿ: Ananth Kumar Hegde: ಸಂಸದ ಅನಂತ್ ಕುಮಾರ ಹೆಗಡೆ ವಿರುದ್ಧ FIR ಗೆ ಬಿತ್ತು ಬ್ರೇಕ್
![](https://hosakannada.com/wp-content/uploads/2024/07/Middle.jpeg)
ಅಫ್ತಾಬ್ ಬಂಧನವಾದಾಗಿನಿಂದಲೂ ಅಪಾಯಕಾರಿ ಎಂಬ ಕಾರಣಕ್ಕೆ ಆತನನ್ನು ಏಕಾಂಗಿಯಾಗಿ ಜೈಲಿನಲ್ಲಿ ಇಡಲಾಗಿತ್ತು. ಇದನ್ನು ಪ್ರಶ್ನಿಸಿ ಆತನ ವಕೀಲ ಹೈಕೋರ್ಟ್ ಮೊರೆ ಹೋಗಿದ್ದು, ಕನಿಷ್ಠ ದಿನಕ್ಕೆ ಎರಡು ಗಂಟೆಯಾದರೂ ಏಕಾಂಗಿ ಕೋಣೆಯಿಂದ ಹೊರ ಬಿಡುವಂತೆ ಆದೇಶ ಮಾಡಬೇಕು ಎಂದು ಮನವಿಯನ್ನು ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಈ ಆದೇಶವನ್ನು ನೀಡಿದೆ.
ಇದನ್ನೂ ಓದಿ: CAA: ಸಿಎಎ ಆಪ್ ಬಿಡುಗಡೆ, ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ