Shraddha Case: ಶ್ರದ್ಧಾ ಕೊಲೆ ಕೇಸ್‌ ಪ್ರಕರಣ; ಆರೋಪಿ ಅಫ್ತಾಬ್‌ಗೆ ಒಂಟಿ ಕೋಣೆಯಿಂದ ಮುಕ್ತಿ

Delhi Shraddha Murder Case: ದೇಶದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಶ್ರದ್ಧಾ ವಾಕರ್‌ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್‌ ಅಮಿನ್‌ ಪೂನಾವಾಲನನ್ನು ದಿನಕ್ಕೆ ಎಂಟು ಗಂಟೆಗಳ ಕಾಲ ಇತರ ಕೈದಿಗಳ ಜೊತೆ ಬಿಡಬೇಕೆಂದು ದಿಲ್ಲಿ ಹೈಕೋರ್ಟ್‌ ಶುಕ್ರವಾರ ಆದೇಶ ಮಾಡಿದೆ.

ಇದನ್ನೂ ಓದಿ: Ananth Kumar Hegde: ಸಂಸದ ಅನಂತ್‌ ಕುಮಾರ ಹೆಗಡೆ ವಿರುದ್ಧ FIR ಗೆ ಬಿತ್ತು ಬ್ರೇಕ್‌

ಅಫ್ತಾಬ್‌ ಬಂಧನವಾದಾಗಿನಿಂದಲೂ ಅಪಾಯಕಾರಿ ಎಂಬ ಕಾರಣಕ್ಕೆ ಆತನನ್ನು ಏಕಾಂಗಿಯಾಗಿ ಜೈಲಿನಲ್ಲಿ ಇಡಲಾಗಿತ್ತು. ಇದನ್ನು ಪ್ರಶ್ನಿಸಿ ಆತನ ವಕೀಲ ಹೈಕೋರ್ಟ್‌ ಮೊರೆ ಹೋಗಿದ್ದು, ಕನಿಷ್ಠ ದಿನಕ್ಕೆ ಎರಡು ಗಂಟೆಯಾದರೂ ಏಕಾಂಗಿ ಕೋಣೆಯಿಂದ ಹೊರ ಬಿಡುವಂತೆ ಆದೇಶ ಮಾಡಬೇಕು ಎಂದು ಮನವಿಯನ್ನು ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಕೋರ್ಟ್‌ ಈ ಆದೇಶವನ್ನು ನೀಡಿದೆ.

ಇದನ್ನೂ ಓದಿ: CAA: ಸಿಎಎ ಆಪ್‌ ಬಿಡುಗಡೆ, ಈ ಲಿಂಕ್‌ ಮೂಲಕ ಅರ್ಜಿ ಸಲ್ಲಿಸಿ

Leave A Reply

Your email address will not be published.