Bengaluru: ದರ್ಶನ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಂದ ದವಸ ಧಾನ್ಯಗಳ ಕೊಡುಗೆ!!! ದರ್ಶನ ಮನೆಗೆ ಧಾನ್ಯಗಳ ವಿತರಣೆ!!

ಬೆಂಗಳೂರು: ಈ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 47ನೇ ಹುಟ್ಟುಹಬ್ಬವನ್ನು ಫೆಬ್ರವರಿ 16 ರಂದು ಆಚರಿಸಿಕೊಳ್ಳುತ್ತಿದ್ದಾರೆ. ದರ್ಶನ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಬಹಳ ವಿಜೃಂಭಣೆಯಿಂದ ಆಚರಿಸಲಿದ್ದಾರೆ.

ದರ್ಶನ್ ಅವರ ಹುಟ್ಟುಹಬ್ಬ ತುಂಬಾ ದಿನ ಇರುವಾಗಲೇ ಅಭಿಮಾನಿಗಳು ಹೇಗೆಲ್ಲಾ ಬರ್ತಡೆಯನ್ನು ಸೆಲೆಬ್ರೇಟ್ ಮಾಡಬೇಕು, ಎಂಬುದರ ಸಿದ್ಧತೆಯಲ್ಲಿದ್ದಾರೆ. ದರ್ಶನ್ ಮನೆ ಮುಂದೆ ಒಂದು ಪೋಸ್ಟರ್ ಹಾಕಲಾಗಿದೆ.

ಇದನ್ನೂ ಓದಿ: Arecanut: ಅಡಿಕೆಯ ತಾಯಿ ಮರವನ್ನು ಆಯ್ಕೆ ಮಾಡುವುದು ತುಂಬ ಸುಲಭ!!

ಅಷ್ಟಕ್ಕೂ ಆ ಪೋಸ್ಟರ್ ಅಲ್ಲಿ ಏನಿದೆ?

ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿರುವ ದರ್ಶನ್ ಪೋಸ್ಟರ್ ಮೂಲಕ ನನ್ನ ಬರ್ತಡೇಗೆ ಕೇಕ್ ,ಹಾರ, ಮುಂತಾದವುಗಳನ್ನು ತರದೆ ತರುವುದಾದರೆ ರೇಷನ್ ದವಸ ಧಾನ್ಯಗಳನ್ನು ತಂದುಕೊಡಿ ಎಂದು ಕೇಳಿಕೊಂಡಿದ್ದಾರೆ. ನೀವು ತಂದ ಆಹಾರವನ್ನು ಸೇರಿಸಿ ಆಶ್ರಮಗಳಿಗೆ ನೀಡುತ್ತೇನೆ. ನೀವು ಇಲ್ಲಿಗೆ ಬಂದು ಪಟಾಕಿ ಘೋಷಣೆಗಳನ್ನು ಹೋಗುವುದರಿಂದ ಅಕ್ಕಪಕ್ಕದ ಮನೆಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಇಂತಹ ಯಾವುದೇ ಸಮಸ್ಯೆಗಳ ನಡೆಯುವುದು ಬೇಡ ಎಂದು ಮನವಿ ಮಾಡಿದ್ದಾರೆ.

ಕಳೆದ ಐದು ಆರು ವರ್ಷಗಳಿಂದಲೂ ದರ್ಶನ್ ಹುಟ್ಟು ಹಬ್ಬದ ದಿನ ಅಭಿಮಾನಿಗಳು ದವಸ ಧಾನ್ಯಗಳನ್ನು ತಂದುಕೊಡುತ್ತಿದ್ದಾರೆ. ಅದು ಈಗಲೂ ಮುಂದುವರೆಯಲಿ. ಈಗಾಗಲೇ ಅಭಿಮಾನಿಗಳು ಮೂಟೆಗಟ್ಟಲೆ ಅಕ್ಕಿಯನ್ನು ತಂದು ನೀಡುತ್ತಿದ್ದಾರೆ.

ದರ್ಶನ್ ಹುಟ್ಟು ಹಬ್ಬಕ್ಕೆ ಅಕ್ಕಿ ಮೂಟೆ ತರುತ್ತಿರುವ ಅಭಿಮಾನಿಗಳು.

ರಾಜರಾಜೇಶ್ವರಿ ನಗರದಲ್ಲಿ ಇರುವ ದರ್ಶನ್ ಮನೆಗೆ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಅಕ್ಕಿ ಮೂಟೆಯನ್ನುತಂದಾಕುತಿದ್ದಾರೆ. ತಮಗೆ ಏನು ಇಷ್ಟವೋ ಅದನ್ನು ತಂದು ಹಾಕುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ಕಣ್ಣಾರೆ ಕಂಡು ಕೈಕುಲಿಕಿ ಫೋಟೋ ತೆಗೆಸಿಕೊಂಡು ಹೋಗುತ್ತಿದ್ದಾರೆ.

ದರ್ಶನ ನ್ಯೂ ಸಿನಿಮಾ ತೆರೆ ಕಾಣುವ ಸಾಧ್ಯತೆ.

ಕಾಟೇರದ ಚಿತ್ರದ ತರುವಾಯ ದರ್ಶನ್ ಡೆವಿಸ್ ಚಿತ್ರವನ್ನು ಮಾಡುತ್ತಿದ್ದಾರೆ. ಮಿಲನ ಪ್ರಕಾಶನ ನಿರ್ದೇಶನದ ಈ ಚಿತ್ರ ಈಗಾಗಲೇ ಶುರುವಾಗಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇದರ ಶೂಟಿಂಗ್ ವೇಗದಿಂದ ಸಾಗುತ್ತಿದೆ. ಈ ಸಿನಿಮಾದ ಫಸ್ಟ್ ಲುಕ್ ಅನ್ನು ಫೆಬ್ರವರಿ 16ರಂದು ಬಿಡುಗಡೆಗೊಳಿಸಲಾಗುತ್ತದೆ. ಇದು ದರ್ಶನ್ ಹುಟ್ಟು ಹಬ್ಬಕ್ಕೆ ಮತ್ತಷ್ಟು ಕಳೆಯನ್ನು ತಂದಿದೆ.

ದರ್ಶನ್ ತಮ್ಮ ಅಭಿಮಾನಿಗಳಲ್ಲಿ ಯಾವುದೇ ಬ್ಯಾನರ್ ಗಳನ್ನ ಕಟ್ಟಬೇಡಿ ಎಂದು ಮನವಿ ಮಾಡಿದ್ದಾರೆ.

Leave A Reply

Your email address will not be published.