Puttur: ಮಿನಿ ಟೆಂಪೋ ನಿಲ್ಲಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಚಾಲಕ
![Puttur](https://hosakannada.com/wp-content/uploads/2024/01/IMG-20240125-WA0001.jpg)
ಪುತ್ತೂರು :ಮಿನಿ ಟೆಂಪೋ ಚಾಲಕರೊಬ್ಬರು ಮನೆ ಸಮೀಪ ಟೆಂಪೋ ನಿಲ್ಲಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಕುರಿಂಜ ಪೊನ್ನಳಡ್ಕದಲ್ಲಿ ಜ.25ರಂದು ನಡೆದಿದೆ.
![](https://hosakannada.com/wp-content/uploads/2024/07/First.jpeg)
![](https://hosakannada.com/wp-content/uploads/2024/07/Middle.jpeg)
ಅರಿಯಡ್ಕ ಗ್ರಾಮದ ಕುರಿಂಜ ಪೊನ್ನಳಡ್ಕ ದಿ.ಅಪ್ಪಯ್ಯ ಮಣಿಯಾಣಿ ಎಂಬವರ ಪುತ್ರ ಯಾದವ ಯಾನೆ ರವೀಂದ್ರ(45ವ) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು.
ಅವರು ಮಹಿಂದ್ರ ಮಿನಿ ಟೆಂಪೋ ಚಾಲಕರಾಗಿದ್ದು, ಜ.25ರಂದು ಅವರು ಮನೆಯಿಂದ ಸ್ವಲ್ಪ ದೂರ ಟೆಂಪೋ ನಿಲ್ಲಿಸಿ ಅಲ್ಲಿಯೇ ಪಕ್ಕದಲ್ಲಿರುವ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.