ವಿಕಾಸ ಥಟ್ ಅಂತ ಹೇಳಿ ಬೆಂಗಳೂರಿನ ರಾಹುಲ್ ಪ್ರಥಮ.

ವಿಜಯನಗರ(ಹೊಸಪೇಟೆ): ವಿಕಾಸ ಬ್ಯಾಂಕಿನ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ, ಯಾಜಿ ಪ್ರಕಾಶನ ಮತ್ತು ವಿವಿಡ್ಲಿಪಿ ಸಹಯೋಗದೊಡನೆ ಡಾ.ನಾ. ಸೋಮೇಶ್ವರ ಅವರ ನೇತೃತ್ವದಲ್ಲಿ ಕನ್ನಡಿಗರಿಗಾಗಿ ಕನ್ನಡದ ಜನಪ್ರಿಯ “ವಿಕಾಸ ಥಟ್ ಅಂತ ಹೇಳಿ” ಸರಣಿ ಕಾರ್ಯಕ್ರಮ, ಸೋಮವಾರದಂದು ಆನ್ಲೈನ್ ವೇದಿಕೆಯಲ್ಲಿ ನಡೆಯಿತು.

ಈ ವಾರದ ಸ್ಪರ್ಧೆಯನ್ನು ವಿಶೇಷವಾಗಿ ಯುವ ಸಮುದಾಯಕ್ಕಾಗಿ ಹಮ್ಮಿಕೊಳ್ಳಲಾಗಿತ್ತು. ಗಂಗಾವತಿ ಶಾಖೆಯಿಂದ ಸಹನಾ.ಜಿ, ಕೊಟ್ಟೂರು ಶಾಖೆಯಿಂದ ಅನಿತಾ.ಎಚ್, ಬೆಂಗಳೂರಿನಿಂದ ರಾಹುಲ್ ಹಾಗೂ ತೊರಣಗಲ್ಲು ಶಾಖೆಯಿಂದ ಮಧುಸೂದನ್.ಎಮ್ ಅವರು ಸ್ಪರ್ಧಿಗಳಾಗಿ ಭಾಗವಹಿಸಿದ್ದರು.

8 ಸುತ್ತುಗಳ ಕಾರ್ಯಕ್ರಮದಲ್ಲಿ ಅಂತಿಮವಾಗಿ ಬೆಂಗಳೂರಿನ ರಾಹುಲ್ 140 ಅಂಕ ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರು. ಉಳಿದಂತೆ ತೊರಣಗಲ್ಲಿನ ಮಧುಸೂದನ್.ಎಮ್ 120 ಅಂಕಗಳನ್ನು, ಕೊಟ್ಟೂರಿನ ಅನಿತಾ.ಎಚ್ 100 ಅಂಕಗಳನ್ನು ಹಾಗೂ ಗಂಗಾವತಿಯ ಸಹನಾ.ಜಿ 70 ಅಂಕಗಳನ್ನು ಗಳಿಸಿದರು.

ಈ ಕಾರ್ಯಕ್ರಮವು ಬಳ್ಳಾರಿ ಶಾಖೆಯ ಬಸಯ್ಯ.ಎಸ್.ಪಿ ಮತ್ತು ಅವರ ತಂಡದ ಮುಂದಾಳತ್ವದಲ್ಲಿ ನಡೆಯಿತು.
ಕಾರ್ಯಕ್ರಮದ ನೇರ ಪ್ರಸಾರ ವಿಕಾಸ ಬ್ಯಾಂಕಿನ ಯೂಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ ಹಾಗೂ ವಿವಿಡ್ಲಿಪಿಯ ಯೂಟ್ಯೂಬ್ ಮತ್ತು ಫೇಸ್ಬುಕ್ ಚಾನೆಲ್ ನಲ್ಲಿ ಪ್ರಸಾರಗೊಂಡಿತ್ತು.

Leave A Reply

Your email address will not be published.