ಬೆಳ್ತಂಗಡಿ | ಜ್ಯುವೆಲ್ಲರಿ ಶಾಪಿನ ಗೋಡೆ ಕೊರೆದು ಒಳ ನುಗ್ಗಿದ ಕಳ್ಳರು

ಬೆಳ್ತಂಗಡಿ : ಉಜಿರೆ ಮುಖ್ಯ ರಸ್ತೆಯಲ್ಲಿರುವ ಆನಂದ ಆಚಾರಿಯವರಿಗೆ ಸೇರಿದ ಶ್ರೀ ಶಾರದಾ ಜ್ಯುವೆಲರ್ಸ್ ಗೆ ತಡ ರಾತ್ರಿ ಕಳ್ಳರು ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ.

ಜ್ಯುವೆಲರ್ಸ್ ನ ಚಿನ್ನಾಭರಣಗಳಿರುವ ರೂಮಿನ ಹೊರಗಡೆಯಿಂದ ಗಟ್ಟಿಯಾದ ಕಬ್ಬಿಣದ ಕಪಾಡು ಮಾಡಿ ಭದ್ರತೆ ಮಾಡಿದ್ದರಿಂದ ಯಾವುದೇ ಚಿನ್ನಾಭರಣಗಳನ್ನು ಕಳ್ಳತನ ಮಾಡಲು ಸಾಧ್ಯವಾಗಿಲ್ಲ.

ಹೀಗಾಗಿ ಜ್ಯುವೆಲರ್ಸ್ ನ ಹಿಂಬದಿಯಲ್ಲಿರುವ ಶ್ರೀನಿಧಿ ಸ್ಟೋರ್ ಗೆ ಸೇರಿದ ಗೋಡೌನ್ ನ ಮೇಲ್ಬಾಗದ ತಗಡಿನ ಶೀಟ್ ಜಾರಿಸಿ ಒಳನುಗ್ಗಿದ ಕಳ್ಳರು ನಂತರ ಜ್ಯುವೆಲರ್ಸ್ ಪಕ್ಕದ ಅಂಗಡಿಯ ಸಂಜೀವ ಗೌಡರ ಮಾಲಕತ್ವದ ಧನ್ವಂತರಿ ಆಯುರ್ವೇದಿಕ್ ಅಂಗಡಿಯ ಗೋಡೆ ಕೊರೆದು ಶ್ರೀ ಶಾರದಾ ಜ್ಯುವೆಲರ್ಸ್ ಗೆ ನುಗ್ಗಿದ್ದಾರೆ.

ಬೆಳಗ್ಗೆ ಎಂದಿನಂತೆ ಅಂಗಡಿ ತೆರೆಯಲು ಬಂದ ಮಾಲೀಕರಿಗೆ ಕಳ್ಳತನ ಪ್ರಯತ್ನದ ವಿಷಯ ತಿಳಿದಿದೆ. ಕೂಡಲೇ ಉಜಿರೆಯ ಉದ್ಯಮಿ ರವಿಚಂದ್ರ ಚಕ್ಕಿತ್ತಾಯ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.