ವಿ.ಹಿಂ.ಪ ಮುಖಂಡ ಶರಣ್‌ ಪಂಪ್‌ವೆಲ್ ಅಪಪ್ರಚಾರ | ಆರೋಪಿಯ ಫೋಟೊದ ಬದಲು ಇನ್ನೊಬ್ಬನ ಫೋಟೋ ವೈರಲ್

ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಅಪಪ್ರಚಾರ ಮಾಡಿದ ಪ್ರಕರಣ ಮೊನ್ನೆ ನಡೆದಿತ್ತು. ಅದರ ಆರೋಪಿಯಾಗಿ ನೌಶಾದ್ ಎಂಬವನನ್ನು ಗುರುತಿಸಲಾಗಿತ್ತು. ಈಗ ಆರೋಪಿ ನೌಶಾದ್ ಬದಲಾಗಿ ಇನ್ನೊಬ್ಬರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದೆ.

ಆರೋಪಿಯೆಂದು ಹೇಳಲಾದ ನೌಶಾದ್ ಎಂಬಾತನ ಫೋಟೊದ ಬದಲಾಗಿ ಲಾಯಿಲದ ಸುದೀಪ್ ಎಂಬವರ ಫೋಟೊವನ್ನು ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದೆ.

ಈ ಕುರಿತು ಈಗಾಗಲೇ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ‌.

ಸಾಮಾಜಿಕ ಜಾಲತಾಣದ ಮೂಲಕ ಇನ್ನೊಬ್ಬರ ತೇಜೋವಧೆ ಮಾಡುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.

ಇಷ್ಟೆಲ್ಲಾ ಕ್ರಮಗಳನ್ನು ಕೈಗೊಂಡ ಮೇಲೂ ಕೂಡಾ ದುಷ್ಕರ್ಮಿಗಳು ಅಮಾಯಕರ ಹುಡುಗರ ಫೋಟೋ ಎಡಿಟ್ ಮಾಡಿ ಮಾನಹಾನಿ ಮಾಡುವವರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳ ಬೇಕೆನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

Leave A Reply

Your email address will not be published.