ಕ್ರಿಕೆಟ್ ಆಡುತಿದ್ದವರ ವಿರುದ್ಧ ಪ್ರಕರಣ ದಾಖಲು

ಲಾಕ್‍ಡೌನ್ ಆದೇಶ ಉಲ್ಲಂಘಿಸಿ ಕ್ರಿಕೆಟ್ ಆಡುತಿದ್ದ ಸ್ಥಳಕ್ಕೆ ಕಾಪು ಇನ್ಸ್ ಪೆಕ್ಟರ್ ನೇತೃತ್ವದ ತಂಡ ದಾಳಿ ನಡೆಸಿ 9 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಘಟನೆ ಉಚ್ಚಿಲದ ಭಾಸ್ಕರ್ ನಗರದಲ್ಲಿ ರವಿವಾರ ನಡೆದಿದೆ.

ಇನ್ಸ್ ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ದಾಳಿ ನಡೆಸಿದ್ದು, ನಾಲ್ಕು ದ್ವಿಚಕ್ರ ವಾಹನಗಳು, 1 ಕಾರು, ಕ್ರಿಕೆಟ್ ಆಡಲು ಉಪಯೋಗಿಸಿದ ಪರಿಕರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಎರ್ಮಾಳಿನ ಸೂರಜ್, ಉಚ್ಚಿಲದ ರೂಪೇಶ್ ಬಂಗೇರ, ಭಾಸ್ಕರ್ ನಗರದ ಅಕ್ಷಯ್ ಸಾಲಿಯಾನ್, ಉಚ್ಚಿಲದ ಚೇತನ್ ವೈ, ಭಾಸ್ಕರ್ ನಗರದ ಸಂದೀಪ್ ಕುಮಾರ್, ಬಡಾ ಗ್ರಾಮದ ಸರ್ವೋತ್ತಮ್ ಸೋನ್ಸ್, ಪ್ರಜ್ವಲ್, ಪ್ರಖ್ಯಾತ್, ರಾಕೇಶ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Leave A Reply

Your email address will not be published.