ಗೇಮ್ ಆಡಲು ಮೊಬೈಲ್ ನೀಡದಕ್ಕೆ ಬಾಲಕಿ ಬಾವಿಗೆ ಹಾರಿ ಆತ್ಮಹತ್ಯೆ

ವೀಡಿಯೊ ಗೇಮ್ ಆಡಲು ಮೊಬೈಲ್ ನೀಡದ ಕಾರಣಕ್ಕೆ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಟಪಾಡಿ ಮಣಿಪುರ ಗ್ರಾಮದಲ್ಲಿ ನಡೆದಿದೆ.

ಕಟಪಾಡಿ ಮಣಿಪುರ ಗ್ರಾಮದ ಕೋಟೆ ನಿವಾಸಿ ಶಾಬನ್ ಎಂಬವರ ಪುತ್ರಿ ಸುಹೇಬತ್ ಅಸ್ಲಮೀಯಾ (16) ಮೃತ ಬಾಲಕಿ. ದಿನಂಪ್ರತಿ ಈಕೆ ಮೊಬೈಲ್‌ನಲ್ಲಿ ಆಡುತ್ತಿದ್ದಳೆನ್ನಲಾಗಿದೆ.

ಈ ಕುರಿತು ಆಕೆಗೆ ತಂದೆತಾಯಿ ಬುದ್ದಿ ಹೇಳಿದರೂ ಕೇಳದೆ ಮನೆಯಲ್ಲಿ ಹಠ ಮಾಡಿಕೊಳ್ಳುತ್ತಿದ್ದಳು. ಮೇ 15ರಂದು ರಾತ್ರಿ ಆಕೆ ಮನೆಯಲ್ಲಿ ಮೊಬೈಲ್ ನಲ್ಲಿ ಆಟ ಆಡುತ್ತಿದ್ದು, ಈ ಬಗ್ಗೆ ತಾಯಿ ಮೊಬೈಲ್ ನಲ್ಲಿ ಆಟ ಆಡದಂತೆ ಬುದ್ದಿ ಹೇಳಿ ಮೊಬೈಲ್ ಆಕೆ ಯಿಂದ ಕಿತ್ತುಕೊಂಡಿದ್ದರು ಎನ್ನಲಾಗಿದೆ.

ಇದೇ ಸಿಟ್ಟಿನಲ್ಲಿ ಆಕೆ ಮನೆಯಿಂದ 200 ಮೀ. ದೂರದಲ್ಲಿರುವ ಸರಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು ಎಂದು ದೂರಲಾಗಿದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.