ಸೆಕೆ ಎಂದು ಬಾಗಿಲು ತೆರೆದಿಟ್ಟು ಮಲಗಿದರು | ಮನೆಗೇ ನುಗ್ಗಿ ಮಗುವನ್ನು ಹೊತ್ತೊಯ್ದು ತಿಂದ ಚಿರತೆ

ಮನೆಗೇ ನುಗ್ಗಿ ಮಗುವನ್ನು ಚಿರತೆ ಹೊತ್ತೊಯ್ದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

ಮನೆಯಲ್ಲಿ ಬೇಸಗೆಯ ನಿಮಿತ್ತ ಮನೆಯವರೆಲ್ಲರೂ ಕಿಟಕಿ ಬಾಗಿಲು ತೆರೆದಿಟ್ಟು ಮಲಗಿದ್ದರು.
ರಾತ್ರಿಯಲ್ಲಿ ಅದ್ಯಾವುದೋ ಸಮಯದಲ್ಲಿ ಮೆಲ್ಲನೆ ವಾಸನೆ ಹಿಡಿದು ಒಳಬಂದ ಚಿರತೆಯು ಯಾರಿಗೂ ಗೊತ್ತಾಗದಂತೆ, ಮನೆಗೇ ನುಗ್ಗಿ ಮಗುವನ್ನು ಮನೆಯಿಂದ ಹೊತ್ತೊಯ್ದಿದೆ.

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಬಿಳಗುಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮಗುವಿನ ತಂದೆ ಚಂದ್ರಣ್ಣ ಮತ್ತು ಮಂಗಳ ಗೌರಮ್ಮ ಪುತ್ರ ಹೇಮಂತ್ ನೇ ಈ ದುರ್ದೈವಿ ಬಾಲಕ. ಅರ್ಧಂಬರ್ಧ ತಿಂದ ಮಗುವಿನ ದೇಹ ಕಂಡು ಪೋಷಕರ ರೋದನೆ ಮುಗಿಲು ಮುಟ್ಟಿದೆ.

ಹೊತ್ತೊಯ್ದ ಮಗುವನ್ನು ಸ್ವಲ್ಪ ದೂರ ತೆಗೆದುಕೊಂಡು ಹೋದ ಚಿರತೆ ಅಲ್ಲಿ ಮಗುವಿನ ದೇಹವನ್ನು ಅರೆಬರೆ ತಿಂದಿದೆ. ಆ ನಂತರ ಅಲ್ಲಿಂದ ಕಾಲು ಕಿತ್ತಿದೆ. ಘಟನೆಯು ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Leave A Reply

Your email address will not be published.