ಮೂರ್ತೆದಾರ ಸೇವಾ ಸಹಕಾರಿ ಸಂಘ, ನೆಲ್ಯಾಡಿ ಇವರ ವತಿಯಿಂದ 15 ಕುಟುಂಬಗಳಿಗೆ ಅಕ್ಕಿ ಹಾಗೂ ದಿನಸಿ ವಿತರಣೆ

ಮೂರ್ತೆದಾರ ಸೇವಾ ಸಹಕಾರಿ ಸಂಘ, ಉಪ್ಪಿನಂಗಡಿ, ನೆಲ್ಯಾಡಿ ಇದರ ವತಿಯಿಂದ 15 ಕುಟುಂಬಗಳಿಗೆ ಅಕ್ಕಿ ಹಾಗೂ ದಿನಸಿ ಸಾಮಗ್ರಿ ಗಳನ್ನು ಮೂರ್ತೆದಾರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಉಷಾ ಅಂಚನ್ ನೇತೃತ್ವದಲ್ಲಿ ಹಂಚಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಗಿರೀಶ್ ಬದನೆ, ನಿರ್ದೇಶಕರಾದ ಜನಾರ್ದನ್ ಬಾಣಜಾಲು, ಬಾಳಪ್ಪ ಕಲಾಯಿ, ಉದ್ಯಮಿಗಳಾದ ನವೀನ್ ಶ್ರೀ ಕಟೀಲ್ ಕೊಪ್ಪ, ಕೃಷಿಕರಾದ ಇಂದು ಶೇಖರ್, ಗ್ರಾಮ ಪಂಚಾಯತ್ ಸದಸ್ಯರಾದ ಅಬ್ರಹಾಂ ನೆಲ್ಯಾಡಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆಯಾದ ಲತಾ, ಶಾಖಾಧಿಕಾರಿ ಗಳಾದ ಎಲ್ಯಣ್ಣ ಮತ್ತು ಸಿಬ್ಬಂದಿಯಾದ ನವೀನ್ ಅವರು ಉಪಸ್ಥಿತರಿದ್ದರು.

ವಿಶೇಷ ಸೂಚನೆ : ನಿಜಕ್ಕೂ ಕಷ್ಟದಲ್ಲಿರುವ ನಿಮಗೆ ತಿಳಿದಿರುವ ಇತರ ಕುಟುಂಬಗಳನ್ನುಲ್ ಸೂಚಿಸಿ. ನಮ್ಮ ಕೈಲಾದ ರೀತಿಯಲ್ಲಿ ತಂಡದ ಮೂಲಕ ಸಹಕರಿಸೊಣ

Leave A Reply

Your email address will not be published.