Home » ಹಣ ಡ್ರಾ ಮಾಡಲು ಖಾತೆದಾರರೇ ಬರಬೇಕು ಎಂದ ಸಿಬ್ಬಂದಿ – ಸಮಾಧಿಯಿಂದ ತಂಗಿ ಹೆಣ ತೆಗೆದು ಬ್ಯಾಂಕ್‌ಗೆ ಹೊತ್ತುತಂದ ಅಣ್ಣ!!

ಹಣ ಡ್ರಾ ಮಾಡಲು ಖಾತೆದಾರರೇ ಬರಬೇಕು ಎಂದ ಸಿಬ್ಬಂದಿ – ಸಮಾಧಿಯಿಂದ ತಂಗಿ ಹೆಣ ತೆಗೆದು ಬ್ಯಾಂಕ್‌ಗೆ ಹೊತ್ತುತಂದ ಅಣ್ಣ!!

0 comments

ಹಣ ಬಿಡಿಸಲು ಖಾತೆದಾರರೇ ಬರಬೇಕು ಎಂದು ಬ್ಯಾಂಕ್ ಸಿಬ್ಬಂದಿ ಹಠ ಮಾಡಿದ ಕಾರಣ ಅಣ್ಣನೊಬ್ಬ ಸಮಾಧಿಯಿಂದ ತಂಗಿಯ ಹೆಣವನ್ನು ತೆಗೆದುಕೊಂಡು ಬ್ಯಾಂಕ್ ಗೆ ಬಂದ ಆಘಾತಕಾರಿ ಘಟನೆ ಒಂದು ನಡೆದಿದೆ

ಒಡಿಶಾದ ಗ್ರಾಮೀಣ ಬ್ಯಾಂಕ್‌ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಜಿತು ಮುಂಡ ಎಂಬ ವ್ಯಕ್ತಿಯ ತಂಗಿ ಕಲ್ರ ಮುಂಡ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದರು. ಸಾಯುವ ಮುನ್ನ ಕಲ್ರ ಮುಂಡ ಸೋದರ ಜಿತು ಬಳಿ ತನ್ನ ಬ್ಯಾಂಕ್ ಖಾತೆಯಲ್ಲಿ 19,300 ರೂಪಾಯಿಗಳಿದ್ದು, ಅದನ್ನು ಪಡೆದುಕೊಳ್ಳುವಂತೆ ಹೇಳಿದ್ದರು. ಹೀಗಾಗಿ ಜಿತು ಮುಂಡ ಅವರು ಬ್ಯಾಂಕ್‌ಗೆ ತೆರಳಿದಾಗ ಬ್ಯಾಂಕ್ ಸಿಬ್ಬಂದಿ ಖಾತಾದಾರರನ್ನು ಕರೆದುಕೊಂಡು ಬಾ ಇಲ್ಲವೇ ನೀನು ಹೇಳುವ ಹಾಗೆ ಮೃತಪಟ್ಟಿದ್ದರೆ ಮರಣ ಪತ್ರದ ಸಾಕ್ಷಿ ತೆಗೆದುಕೊಂಡು ಬಾ ಎಂದಿದ್ದರು.

ತನ್ನ ತಂಗಿ ತೀರಿ ಹೋಗಿದ್ದಾಳೆ ಎಂದು ಅವರು ಬ್ಯಾಂಕ್ ಸಿಬ್ಬಂದಿ ಬಳಿ ಬೇಡಿಕೊಂಡರು ಕೂಡ ಬೇರೆಯವರಿಗೆ ಹಣ ಕೊಡಲಾಗದು ಖಾತೆದಾರರೇ ಬರಬೇಕು ಎಂದು ಅವರು ಹೇಳಿದ್ದಾರೆ. ಕಡು ಬಡವನಾಗಿರುವ ಜಿತು ಮುಂಡಗೆ ಮರಣ ಪತ್ರ ಪಡೆದುಕೊಳ್ಳುವುದು ಕಷ್ಟಕರವಾಗಿದ್ದ ಕಾರಣ ಆತ ತನ್ನ ಸಹೋದರಿಯ ಹೆಣವನ್ನು ಸಮಾಧಿಯಿಂದ ತೆಗೆದು ಬ್ಯಾಂಕ್‌ಗೆ ತಂದಿದ್ದಾನೆ. ಬ್ಯಾಂಕ್‌ನಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿದ್ದ ಸಮಾಧಿಯಿಂದ ಸಹೋದರಿಯ ಹೆಣವನ್ನು ಪ್ಲಾಸ್ಟಿಕ್ ಚೀಲದಲ್ಲಿ ಅರ್ಧ ಮುಚ್ಚಿ ಹೆಗಲೆ ಮೇಲೆ ಹೊತ್ತುತಂದಿದ್ದಾನೆ.

ಈ ದೃಶ್ಯ ಕಂಡು ರಸ್ತೆಯಲ್ಲಿದ್ದವರು ವಿಡಿಯೊ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 19300 ರೂ ಹಣಕ್ಕಾಗಿ ವ್ಯಕ್ತಿಯೊಬ್ಬ ತನ್ನ ಸಹೋದರಿಯ ಹೆಣವನ್ನು ಸಮಾಧಿಯಿಂದ ಬ್ಯಾಂಕ್‌ಗೆ ಹೊತ್ತು ತರುತ್ತಿರುವ ಬಗ್ಗೆ ಇದೀಗ ಭಾರೀ ಚರ್ಚೆ ನಡಿದಿದ್ದು, ಬಡತನದ ಬಗ್ಗೆ ಕನಿಕರ ತೋರಿದ್ದಾರೆ.

banner

https://x.com/i/status/2048998442828218545

You may also like