Home » ಸಿಎಂ ಡಿಕೆಶಿ ಮನೆ ಬಳಿ ಮಾಟಮಂತ್ರ – ಕುಟುಂಬ, ಮಕ್ಕಳಲ್ಲಿ ಹೆಚ್ಚಿದ ಆತಂಕ!!

ಸಿಎಂ ಡಿಕೆಶಿ ಮನೆ ಬಳಿ ಮಾಟಮಂತ್ರ – ಕುಟುಂಬ, ಮಕ್ಕಳಲ್ಲಿ ಹೆಚ್ಚಿದ ಆತಂಕ!!

0 comments

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸದ ಬಳಿ ಇರುವ ರಸ್ತೆಯಲ್ಲಿ ವಾಮಾಚಾರ ವಸ್ತುಗಳು ಬಿದ್ದಿದ್ದು,  ಮಾಟ ಮಂತ್ರದ ಶಂಕೆ ವ್ಯಕ್ತವಾಗಿದ್ದು. ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದೆ.

ಇದನ್ನು ಕಂಡು ಜನರು ಆತಂಕಗೊಂಡಿದ್ದು, ಆ ರಸ್ತೆಯಲ್ಲಿ ಓಡಾಡೋಕೆ ಹೆದರುತ್ತಿದ್ದಾರೆ. ವೃತ್ತ ಬರೆದ ಸ್ಥಳದಲ್ಲೇ ಬಿದ್ದಿದೆ ನಾಟಿ ಕೋಳಿ, ಇನ್ನು ನಾಯಿಯೊಂದು ಕೋಳಿ ತಲೆಯನ್ನ ಎತ್ತಿಕೊಂಡು ಹೋಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಓಡೋಡಿ ಬಂದಿದ್ದಾರೆ. ಬಳಿಕ ಪೊಲೀಸರು ವಾಮಾಚಾರ ಮಾಡಿದ್ದ ಕೋಳಿಯನ್ನ ಎತ್ತಿ ಬಿಸಾಡಿದ್ದಾರೆ.

ಯಾರೋ ದುಷ್ಕರ್ಮಿಗಳು ಮಧ್ಯರಾತ್ರಿ ಅಥವಾ ಮುಂಜಾನೆ ವೇಳೆ ಯಾರಿಗೂ ತಿಳಿಯದಂತೆ ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ವಿವಿಐಪಿಗಳು ವಾಸಿಸುವ, ಸದಾ ಪೊಲೀಸ್ ಭದ್ರತೆ ಇರುವ ಇಂತಹ ಪ್ರದೇಶದಲ್ಲೇ ಇಂತಹದ್ದೊಂದು ಅನಿಷ್ಟ ಪದ್ಧತಿಯ ಆಚರಣೆ ನಡೆದಿರುವುದು ಸಾರ್ವಜನಿಕರಲ್ಲಿ, ವಿಶೇಷವಾಗಿ ಪೋಷಕರು ಮತ್ತು ಮಕ್ಕಳಲ್ಲಿ ಭೀತಿಯನ್ನು ಹುಟ್ಟುಹಾಕಿದೆ. ಸ್ಥಳೀಯರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

You may also like