ಕೇರಳದ ಕಣ್ಣೂರಿನ ಬಾವಲಿ ನದಿಯ ದಂಡೆಯ ಮೇಲೆ ಕೊಟ್ಟಿಯೂರು ಮಹಾದೇವ ದೇವಸ್ಥಾನವಿದ್ದು, ಇಲ್ಲಿ ಶಿವನು ತನ್ನ ಪ್ರೇಮವನ್ನು ಕಳೆದುಕೊಂಡ ಅಂದರೆ ಸತಿ ದೇವಿ ಪ್ರಾಣಬಿಟ್ಟಳು ಎಂದು ನಂಬಲಾಗುತ್ತದೆ. ಇದನ್ನು ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಈಗ 27 ದಿನಗಳ ವೈಶಾಖ ಮಹೋತ್ಸವ ನಡೆಯುತ್ತಿದ್ದು ಲಕ್ಷಾಂತರ ಜನರು ಹೋಗುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಂತೂ ನಮ್ಮ ಕರ್ನಾಟಕದ ಭಕ್ತರೇ ಇಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ. ಯಾವುದೇ ಸೋಶಿಯಲ್ ಮೀಡಿಯ ಓಪನ್ ಮಾಡಿದರು ಕೂಡ ಇದರ ವಿಡಿಯೋಗಳು ಕಂಡುಬರುತ್ತವೆ.


ಆದರೆ ಇದೀಗ ಈ ಕೊಟ್ಟಿಯೂರಿನಲ್ಲಿ ಕನ್ನಡಿಗರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಕೂಗು ಕೇಳಿ ಬರುತ್ತದೆ. ಹೌದು, “ಎಲ್ಲಿ ನೋಡಿದರೂ ನೂಕು ನುಗ್ಗುಲು, ವ್ಯವಸ್ಥೆ ಸರಿ ಇಲ್ಲ, ಮಾನವೀಯತೆ ಇಲ್ಲ, ಕರ್ನಾಟಕದವರನ್ನು ವಿಚಿತ್ರವಾಗಿ ನೋಡ್ತಾರೆ, ಗೂಂಡಾಗಳ ತರ ವರ್ತಿಸ್ತಾರೆ, ಸೇಫ್ಟಿ ಇಲ್ಲ, ಯಾರೂ ಈ ದೇವಸ್ಥಾನಕ್ಕೆ ಬರಬೇಡಿ, ಕನ್ನಡಿಗರಿಗೆ ಇಲ್ಲಿ ಮರ್ಯಾದೆ ಕೊಡುವುದಿಲ್ಲ ಎಂದು ವಿಡಿಯೋ ಮೂಲಕ ಹೇಳುತ್ತಿದ್ದಾರೆ.
ಅಲ್ಲದೆ ಇನ್ನು ಕೆಲವು ವಿಡಿಯೋಗಳಲ್ಲಿ ಕನ್ನಡಿಗರ ಮೇಲೆ ಕೊಟ್ಟಿಯೂರಿನಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿಡಿಯೋಗಳನ್ನು ತೋರಿಸಲಾಗಿದೆ. ಒಂದು ವಿಡಿಯೋದಲ್ಲಿ ಮಹಿಳೆಯರು ಅಲ್ಲಿ ನಡೆದ ಕೆಲವು ಅವ್ಯವಸ್ಥೆಗಳ ಕುರಿತು ಮಾತನಾಡುತ್ತಿದ್ದಾರೆ ಅಲ್ಲಿರುವ ಸಿಬ್ಬಂದಿಗಳು ಸುತ್ತಲೂ ನಿಂತು ಕಾಲಿನಿಂದ ಆಕೆಗೆ ನೀರನ್ನು ಎರಚುವುದನ್ನು ಕಾಣಬಹುದು. ಯಾರೋ ಒಬ್ಬರು ಈ ರೀತಿ ವಿಡಿಯೋ ಮಾಡಿ ಹಾಕಿದರೆ ಯಾರದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅಲ್ಲಿ ಹೋದ ಅನೇಕರು ಈ ರೀತಿಯ ವಿಡಿಯೋಗಳನ್ನು ಮಾಡಿದರೆ ಕೊಂಚ ಈ ಬಗ್ಗೆ ಯೋಚಿಸಬೇಕಾಗುತ್ತದೆ.
