Home Entertainment ವಧುವಿನ ನಿಗೂಢ ನಡೆ: ವರ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ನಡೆದೆಹೊಯ್ತು ಘೋರ ದುರಂತ!!

ವಧುವಿನ ನಿಗೂಢ ನಡೆ: ವರ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ನಡೆದೆಹೊಯ್ತು ಘೋರ ದುರಂತ!!

Hindu neighbor gifts plot of land

Hindu neighbour gifts land to Muslim journalist

ಮದುವೆ ಎಂಬ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಬೇಕಿದ್ದ ವಧು ಕಾಲದ ಕರೆಗೆ ಓಗೊಟ್ಟು ಇಹಲೋಕದ ಯಾತ್ರೆಯನ್ನ ಮುಗಿಸಿದ ಹೃದಯ ವಿದ್ರಾವಕ ಘಟನೆಯೊಂದು ವರದಿಯಾಗಿದೆ. ಈ ದುರ್ಘಟನೆ ನಡೆದಿದ್ದು ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯ ನವೀಪೇಟೆ ಎಂಬಲ್ಲಿ!!! ನವ ಜೀವನದ ಕನಸು ಹೊತ್ತ ಜೋಡಿಗೆ ಆಘಾತ ಕಾದಿತ್ತು!!.. ಹೌದು… ಇನ್ನೇನು ಕೆಲವೇ ಗಂಟೆಗಳಲ್ಲಿ ವಧುವಿಗೆ ವರ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ಸಾವಿನ ಕದ ತಟ್ಟಿದ ಆತಂಕಕಾರಿ ಘಟನೆ ನಡೆದಿದೆ.

ಇಂದು ಮುಂಜಾನೆ ಈ ದುರ್ಘಟನೆ ನಡೆದಿದ್ದು, ಎಲ್ಲೆಡೆ ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಯಾರ ಕೆಟ್ಟ ದೃಷ್ಟಿ ಈ ಜೋಡಿಯ ಮೇಲೆ ಬಿತ್ತೋ ತಿಳಿಯದು. ನೂರಾರು ಕನಸು ಹೊತ್ತ ಜೋಡಿಗೆ ವಿಧಿ ಲಿಖಿತವೆ ಬೇರೆ ಇತ್ತು ಎಂದು ಯಾರು ತಾನೇ ಊಹಿಸಲು ಸಾಧ್ಯ!! ವಧುವಿನ ಸಾವಿನ ಸುದ್ದಿ ಕೇಳಿ ಸಂಭ್ರಮದ ವಾತಾವರಣ ಮಾಯವಾಗಿ ಸೂತಕದ ಛಾಯೆ ಆವರಿಸಿತ್ತು.

ಈ ದುರ್ಘಟನೆ ಯಿಂದ ಶುಭ ಗಳಿಗೆಗೆ ಬಂದವರೆಲ್ಲ ಆಘಾತಕ್ಕೀಡಾಗಿದ್ದರು. ಮೃತ ವಧುವನ್ನು ರಾವಲ್ಲಿ ಎಂದು ಗುರುತಿಸಲಾಗಿದ್ದು, ಶುಭ ಗಳಿಗೆಗೆ ಅಂತಿಮ ತಯಾರಿಯಲ್ಲಿದ್ದ ಎರಡು ಕುಟುಂಬಸ್ಥರಿಗೆ ನಿಜಕ್ಕೂ ಆಘಾತ ಉಂಟಾಗಿದೆ. ರಾವಲ್ಲಿ ಮದುವೆ ನಿಜಾಮಾಬಾದ್​ ಮೂಲದ ಸಂತೋಷ್ ಎಂಬುವರ ಜೊತೆ ನಿಗದಿಯಾಗಿದ್ದು, ಆದರೆ, ಮದುವೆ ದಿನವೇ ನಡೆದ ದುರಂತ ಎಲ್ಲರನ್ನು ಆಘಾತಕ್ಕೆ ದೂಡಿದ್ದು, ಮೃತಳ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.

ಬಲವಂತವದ ಮದುವೆಗೆ ಒಪ್ಪಿಗೆ ಇಲ್ಲದೆ ಇದ್ದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರ ಬಹುದೇನೋ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ . ಇನ್ನೊಂದೆಡೆ ಭಾವಿ ಪತಿಯ ಕಿರುಕುಳದಿಂದ ರಾವಲ್ಲಿ ಸಾವಿಗೀಡಾಗಿದ್ದಾಳೆ ಎಂದು ಪಾಲಕರು ಆರೋಪ ಮಾಡಿದ್ದು, ಆದರೆ, ವಧುವಿನ ಸಾವಿಗೆ ನಿಖರ ಕಾರಣ ಬಹಿರಂಗವಾಗಿಲ್ಲ. ಸದ್ಯ ಖಾಕಿ ಪಡೆ ಈ ಪ್ರಕರಣದ ಕುರಿತು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.