Davangere : ದಾವಣಗೆರೆಯಲ್ಲಿ ಕಾವ್ಯ ಎಂಬ ಯುವತಿ ಇತ್ತೀಚಿಗಷ್ಟೇ ಮದುವೆಯಾಗಿದ್ದಳು. ಆದರೆ ಇದೀಗ ಆಕೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಪತಿಯ ಅಕ್ರಮ ಸಂಬಂಧದ ಸಾಕ್ಷ್ಯ ಸಂಗ್ರಹಿಸಿದ್ದಕ್ಕಾಗಿ ಗಂಡನೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಕಾವ್ಯಳ ಪೋಷಕರು ಆರೋಪಿಸಿ ದೂರು ನೀಡಿದ್ದಾರೆ.


ಮಂಡಲೂರು ಗ್ರಾಮದ 26 ವರ್ಷದ ಕಾವ್ಯ ಮೃತಪಟ್ಟ ಗೃಹಿಣಿ. ಎರಡು ವರ್ಷದ ಹಿಂದೆ ಕಾವ್ಯ ಹೊದಿಗೆರೆ ನಿವಾಸಿ ರವಿ ಎಂಬಾತನ ಮದುವೆ ಆಗಿದ್ದಳು. ಆದರೆ ಕಾವ್ಯ ಪತಿ ಮನುವಿಗೆ ಬೇರೆ ಯುವತಿ ಜೊತೆ ಅಕ್ರಮ ಸಂಬಂಧವಿತ್ತು. ಪತಿ ಮನುವಿಗೆ ಬೇರೆ ಯುವತಿ ಜೊತೆ ಅಕ್ರಮ ಸಂಬಂಧ ಇರುವ ಬಗ್ಗೆ ಕಾವ್ಯ ದಾಖಲೆ ಸಂಗ್ರಹ ಮಾಡಿದ್ದಳು. ಅನ್ಯ ಯುವತಿ ಜೊತೆ ಆತ ಚಾಟ್ ಮಾಡಿದ್ದ ಸ್ಕ್ರೀನ್ ಶಾಟ್ ಅನ್ನು ಕಾವ್ಯ ಸಂಗ್ರಹಿಸಿದ್ದಳು. ಇದನ್ನು ಪೆನ್ಡ್ರೈವ್ನಲ್ಲಿ ಸೇವ್ ಮಾಡಿದ್ದ ಕಾವ್ಯ ತವರು ಮನೆಯಲ್ಲಿ ತನ್ನ ತಮ್ಮನ ಬ್ಯಾಗ್ನಲ್ಲಿ ಇರಿಸಿದ್ದಳಂತೆ.
ಈಗ ನೋಡಿದ್ರೆ ಮಗಳು ದಾವಣಗೆರೆಯ ಅಂಚೆ ಇಲಾಖೆ ವಸತಿಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದು, ಗಂಡ ಮನುವೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಕಾವ್ಯಾಳ ಪೋಷಕರು ದಾವಣಗೆರೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲಕ್ಷಾಂತರ ಸಾಲ ಮಾಡಿ ಮಗಳ ಮದುವೆ ಮಾಡಲಾಗಿತ್ತು. ಆದರೆ ಕೇವಲ ಎರಡೇ ವರ್ಷಕ್ಕೆ ಮಗಳು ಹೀಗೆ ಪ್ರಾಣ ಕಳೆದುಕೊಂಡಿದ್ದು, ಕಾವ್ಯಳ ಪೋಷಕರು ಕಣ್ಣೀರಿಟ್ಟಿದ್ದಾರೆ.
