ಸೂರತ್ನ ಅಮ್ರೋಲಿ ಪ್ರದೇಶದ ಕೊಸಾದ್ ಹೌಸಿಂಗ್ ಕಾಲೋನಿಯಲ್ಲಿ ಮಾ.11 ರಂದು ಹೆಣವೊಂದು ದೊರಕಿದೆ. ವಿಚಾರಣೆ ಸಂದರ್ಭದಲ್ಲಿ ಅದು ಅದೇ ಪ್ರದೇಶದ ನಿವಾಸಿ ಹಮೀದಾ ಖಾತೂನ್ ಮನ್ಸೂರಿ ಶವ ಎನ್ನೋದು ತಿಳಿದು ಬಂದಿದೆ.

ಹಮೀದಾ ಖಾತೂನ್ ಮನ್ಸೂರಿಗೆ ಸುಮಾರು 57 ವರ್ಷ. ಕುಟುಂಬದ ಜವಾಬ್ದಾರಿ ಅವರದ್ದೇ ಆಗಿತ್ತು. ಇವರ ಪತಿ ಕೆಲ ವರ್ಷಗಳ ಹಿಂದೆ ನಿಧನ ಹೊಂದಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳು, ವಾಸಿಮ್ ಮತ್ತು ಪರ್ವೇಜ್. ಮೂರು ವರ್ಷದ ಹಿಂದೆ ವಾಸಿಮ್ ಶಬಾನಾಳನ್ನು ಮದುವೆ ಆಗಿದ್ದ.
ಸೊಸೆ ಶಬಾನಾ ಬಂದ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ನಂತರ ಸ್ವಲ್ಪ ಸ್ವಲ್ಪವಾಗಿಯೇ ಜಗಳ ಪ್ರಾರಂಭವಾಯಿತು. ಹಮೀದಾ ಕಿರಿಯ ಮಗ ಪರ್ವೇಜ್ ಮನ್ಸೂರಿ ಹಾಗೂ ಅತ್ತಿಗೆ ಶಬಾನಾಗೆ ಅಕ್ರಮ ಸಂಬಂಧ ಇತ್ತು. ಶಬಾನಾ ಸ್ವಲ್ಪ ದಿನ ಬಿಹಾರಕ್ಕೆ ಹೋಗಿದ್ದಳು. ಪರ್ವೇಜ್ ಕೂಡಾ ಅಲ್ಲಿಗೆ ಹೋಗಿದ್ದ. ಅಲ್ಲಿ ಇವರಿಬ್ಬರು ಹತ್ತಿರವಾಗಿದ್ದರು. ಆಮೇಲೆ ಅವರಿಬ್ಬರ ಗುಜರಾತ್ಗೆ ಬಂದ ಮೇಲೂ ಇದು ಮುಂದುವರಿಯಿತು. ಸೂರತ್ನಲ್ಲಿ ಕದ್ದು ಮುಚ್ಚಿ ಸೇರ್ತಿದ್ದರು. ಇದು ಹಮೀದಾಗೆ ತಿಳಿಯುತ್ತಿದ್ದಂತೆ ವಿರೋಧ ವ್ಯಕ್ತಪಡಿಸಿದ್ದರು.
ಇನ್ನು ಪೊಲೀಸರ ಪ್ರಕಾರ, ಹಮೀದಾ ಖಾತೂನ್ ಮತ್ತು ಶಬಾನಾಳ ತಂದೆ ಮೊಹಮ್ಮದ್ ಫಿರೋಜ್ ಆಲಂ ಸಂಬಂಧ ಸರಿ ಇರಲಿಲ್ಲ. ಹಮೀದಾ ಮತ್ತು ಫಿರೋಜ್ ಸಂಬಂಧ ಹೊಂದಿದ್ದಾರೆ ಎನ್ನುವ ವಿಷಯ ಕೂಡಾ ಮನೆಯಲ್ಲಿ ನಡೆಯುತ್ತಿತ್ತು.
ಕೇವಲ ಅಕ್ರಮ ಸಂಬಂಧಕ್ಕೆ ಮಾತ್ರವಲ್ಲ. ಹಣದ ವಿಷಯಕ್ಕೆ ಕೂಡಾ ಜಗಳ ನಡೆಯುತ್ತಿತ್ತು. ಹಮೀದಾ ಖರ್ಚು ಕಡಿಮೆ ಮಾಡುವ ಕುರಿತು ಹೇಳುತ್ತಿದ್ದರು. ಆದರೆ ಇದು ಶಬಾನಾ ಮತ್ತು ಪರ್ವೇಜ್ಗೆ ಇಷ್ಟ ಇರಲಿಲ್ಲ. ಜಗಳ ಹೆಚ್ಚಾಯಿತು. ಶಬಾನಾ ತನ್ನ ಅತ್ತೆ ಕುರಿತು ಅಪ್ಪನಿಗೆ ದೂರನ್ನು ನೀಡಿದಳು. ಶಬಾನಾ ತಂದೆ ಹಮೀದಾಳನ್ನು ಮುಗಿಸುವ ಪ್ಲಾನ್ ಮಾಡಿದ. ಇದನ್ನು ಪರ್ವೇಜ್ಗೆ ಹೇಳಿದ. ಪರ್ವೇಜ್ ಕೂಡಾ ಇದಕ್ಕೆ ಒಪ್ಪಿಗೆ ನೀಡಿದ್ದ.
ಶಬಾನಾ ತಂದೆ ಫಿರೋಜ್ ಆಲಂ ಶಬಾನಾ ಮನೆಗೆ ಬಂದಿದ್ದಾನೆ. ಮಾತನಾಡಲೆಂದು ಹಮೀದಾಳನ್ನು ರೂಂ ಗೆ ಕರೆದಿದ್ದಾನೆ. ನಂತರ ಅಲ್ಲಿ ಉಸಿರುಗಟ್ಟಿಸಿ ಹಮೀದಾಳನ್ನು ಹತ್ಯೆಗೈದಿದ್ದಾನೆ. ಶಬಾನಾ ಇದನ್ನೆಲ್ಲಾ ನಿಂತು ನೋಡಿದ್ದಾಳೆ. ಅತ್ತೆ ಕಥೆ ಮುಗಿಯುತ್ತಿದ್ದಂತೆ ಪರ್ವೇಜ್ಗೆ ಕಾಲ್ ಮಾಡಿದ್ದಾಳೆ. ಮನೆಗೆ ಬಂದ ಪರ್ವೇಜ್ ಹೆಣವನ್ನು ಚೀಲಕ್ಕೆ ತುಂಬಲು ಸಹಾಯ ಮಾಡಿದ್ದಾನೆ. ಕೈ ಕಾಲು ಕಟ್ಟಿ ಶವವನ್ನು ಚೀಲಕ್ಕೆ ತುಂಬಿದ ಪಿರೋಜ್ ಚೀಲವನ್ನು ಹೆಗಲ ಮೇಲೆ ಹೊತ್ತು ಮನೆಯಿಂದ ಹೊರ ನಡೆದಿದ್ದಾನೆ.
ಮಧ್ಯಾಹ್ನ 12.30 ರ ಸುಮಾರಿಗೆ ಫಿರೋಜ್ ಆಲಂ ಬಿಳಿ ಚೀಲದೊಂದಿಗೆ ನಡೆದುಕೊಂಡು ಹೋಗುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಮನೆಯಿಂದ ಸುಮಾರು 300-500 ಮೀಟರ್ ದೂರದಲ್ಲಿರುವ ದೇವಸ್ಥಾನದ ಬಳಿ ಚೀಲವನ್ನು ಎಸೆದಿದ್ದಾಣೆ. ನಂತರ ರೈಲ್ವೆ ನಿಲ್ದಾಣಕ್ಕೆ ಹೋಗಿ ಬಿಹಾರಕ್ಕೆ ಹೋಗುವ ರೈಲು ಹತ್ತಲು ಪ್ರಯತ್ನ ಮಾಡಿದ್ದಾನೆ.

