ಭಾರತವನ್ನು ಹಿಂದೂ ರಾಷ್ಟ್ರವೆಂದವು ಘೋಷಿಸುವ ಯಾವುದೇ ರೀತಿಯ ಅಗತ್ಯವಿಲ್ಲ ಎಂದು ಆರ್ಎಸ್ ನ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಅಲ್ಲದೆ ಅವರು ಅದಕ್ಕೆ ಕಾರಣವನ್ನು ಕೂಡ ನೀಡಿದ್ದಾರೆ.


ನಾಗ್ಪುರದ ರೇಶಿಂಬಾಗ್ನಲ್ಲಿ ಡಾ ಹೆಡ್ಗೆವಾರ್ ಸ್ಮಾರಕ ಸಮಿತಿಯು ಆಯೋಜಿಸಿದ್ದ, ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಿದವರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಭಾರತ ಈಗಾಗಲೇ ಹಿಂದೂ ರಾಷ್ಟ್ರವಾಗಿದೆ. ಸೋ..ಅದನ್ನು ಹೊಸದಾಗಿ ಹಿಂದೂ ರಾಷ್ಟ್ರವೆಂದು ಘೋಷಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಭಾರತ ಹಿಂದೂ ರಾಷ್ಟ್ರ ಎಂಬ ಕಲ್ಪನೆಯನ್ನು ಹಿಂದೆ ಅಪಹಾಸ್ಯ ಮಾಡಲಾಗುತ್ತಿತ್ತು. ಯಾರು ಅಪಹಾಸ್ಯ ಮಾಡ್ತಿದ್ದರೋ ಅದೇ ಜನ ಇಂದು ಭಾರತವನ್ನು ಹಿಂದೂಗಳ ಭೂಮಿ ಎನ್ನುತ್ತಾರೆ. ಈಗಾಗಲೇ ಇರುವುದನ್ನು ಘೋಷಿಸುವ ಅಗತ್ಯವಿಲ್ಲ. ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ, ನಾವು ಅದನ್ನು ಘೋಷಿಸಬೇಕೇ? ಅದೇ ರೀತಿ, ಭಾರತ ಹಿಂದೂ ರಾಷ್ಟ್ರ ಎಂದಿದ್ದಾರೆ.
