Home » ಕೇರಳಕ್ಕೆ ಬಂದು ಶೋಕಿ ಮಾಡದೆ, ನಿಮ್ಮಲ್ಲಿರುವ ದೇವರುಗಳನ್ನೇ ಪೂಜೆ ಮಾಡಿ – ಕನ್ನಡಿಗರಿಗೆ ಮಲಯಾಳಿಗಳ ಪಾಠ!!

ಕೇರಳಕ್ಕೆ ಬಂದು ಶೋಕಿ ಮಾಡದೆ, ನಿಮ್ಮಲ್ಲಿರುವ ದೇವರುಗಳನ್ನೇ ಪೂಜೆ ಮಾಡಿ – ಕನ್ನಡಿಗರಿಗೆ ಮಲಯಾಳಿಗಳ ಪಾಠ!!

0 comments

‘ಮೊದಲು ನಿಮ್ಮ ದೇವರುಗಳನ್ನು ಪೂಜೆ ಮಾಡುವುದನ್ನು ಕಲಿಯಿರಿ. ಅದನ್ನು ಬಿಟ್ಟು ಕೇರಳಕ್ಕೆ ಬಂದು ಶೋಕಿ ಮಾಡಬೇಡಿ’ ಎಂದು ಕೊಟ್ಟಿಯೂರಿಗೆ ಬೆಂಬಿಡದೆ ತೆರಳುತ್ತಿರುವ, ಬಳಿಕ ಅಲ್ಲಿರುವ ಅವ್ಯವಸ್ಥೆಯನ್ನು  ವಿಡಿಯೋ ಮಾಡಿ ಹಾಕುತ್ತಿರುವ ಕನ್ನಡಿಗರಿಗೆ ಕೇರಳದ ಮಳಿಯಾಳಿಗಳು ನೀತಿ ಪಾಠ ಮಾಡಿದ್ದಾರೆ.

ಕೇರಳದ ಕಣ್ಣೂರಿನ ಬಾವಲಿ ನದಿಯ ದಂಡೆಯ ಮೇಲೆ ಕೊಟ್ಟಿಯೂರು ಮಹಾದೇವ ದೇವಸ್ಥಾನವಿದ್ದು, ಇಲ್ಲಿ ಶಿವನು ತನ್ನ ಪ್ರೇಮವನ್ನು ಕಳೆದುಕೊಂಡ ಅಂದರೆ ಸತಿ ದೇವಿ ಪ್ರಾಣಬಿಟ್ಟಳು ಎಂದು ನಂಬಲಾಗುತ್ತದೆ. ಇದನ್ನು ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಈಗ 27 ದಿನಗಳ ವೈಶಾಖ ಮಹೋತ್ಸವ ನಡೆಯುತ್ತಿದ್ದು ಲಕ್ಷಾಂತರ ಜನರು ಹೋಗುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಂತೂ ನಮ್ಮ ಕರ್ನಾಟಕದ ಭಕ್ತರೇ ಇಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ. ಯಾವುದೇ ಸೋಶಿಯಲ್ ಮೀಡಿಯ ಓಪನ್ ಮಾಡಿದರು ಕೂಡ ಇದರ ವಿಡಿಯೋಗಳು ಕಂಡುಬರುತ್ತವೆ.  ಒಟ್ಟಿನಲ್ಲಿ ಕೇರಳದ ಕೊಟ್ಟಿಯೂರು ದೇವಸ್ಥಾನ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ನಲ್ಲಿದೆ.

ಆದರೆ ಕೆಲ ದಿನಗಳಿಂದ ಈ ಕೊಟ್ಟಿಯೂರಿನಲ್ಲಿ ಕನ್ನಡಿಗರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಕೂಗು ಕೇಳಿ ಬರುತ್ತದೆ. ಎಲ್ಲಿ ನೋಡಿದರೂ ನೂಕು ನುಗ್ಗುಲು, ವ್ಯವಸ್ಥೆ ಸರಿ ಇಲ್ಲ, ಮಾನವೀಯತೆ ಇಲ್ಲ, ಕರ್ನಾಟಕದವರನ್ನು ವಿಚಿತ್ರವಾಗಿ ನೋಡ್ತಾರೆ, ಗೂಂಡಾಗಳ ತರ ವರ್ತಿಸ್ತಾರೆ, ಸೇಫ್ಟಿ ಇಲ್ಲ, ಯಾರೂ ಈ ದೇವಸ್ಥಾನಕ್ಕೆ ಬರಬೇಡಿ, ಕನ್ನಡಿಗರಿಗೆ ಇಲ್ಲಿ ಮರ್ಯಾದೆ ಕೊಡುವುದಿಲ್ಲ. ಸ್ಥಳೀಯರ ಜತೆ ಚೆನ್ನಾಗಿಯೇ ನಡೆದುಕೊಳ್ಳುವ ಸಿಬ್ಬಂದಿ ಕನ್ನಡಿಗರ ಜತೆ ಈ ರೀತಿ ವರ್ತಿಸುತ್ತಿದ್ದಾರೆ ಎಂದು ವಿಡಿಯೋ ಮೂಲಕ ಹೇಳುತ್ತಿದ್ದಾರೆ. 

ಇನ್ನು ಅತ್ತ ಕನ್ನಡಿಗರ ಈ ಆರೋಪಗಳಿಗೆ ಕೇರಳದ ಹಲವು ಜನರು ವಿಡಿಯೊಗಳನ್ನು ಮಾಡಿ ಉತ್ತರ ನೀಡಿದ್ದು, ಇಲ್ಲಿ ಯಾರೂ ಭಾಷೆಯನ್ನು ನೋಡಿ ನಡೆದುಕೊಳ್ಳುತ್ತಿಲ್ಲ, ಮೊದಲು ಒಂದೇ ಸಾರಿ ಹಲವಾರು ಮಂದಿ ಆಗಮಿಸುವುದನ್ನು ಬಿಡಿ, ಇದು ಯಾತ್ರಾಸ್ಥಳವಲ್ಲ, ಸ್ಥಳೀಯರು ಆರಾಧಿಸಲು ಇರುವ ಸ್ಥಳ, ಇದರ ಇತಿಹಾಸ ತಿಳಿಯದೇ ಮಾತನಾಡಬೇಡಿ ಎಂದಿದ್ದಾರೆ. ಇಷ್ಟೇ ಅಲ್ಲದೇ ಇಲ್ಲಿಗೆ ಬರುವ ಕನ್ನಡಿಗರೇ ಇಲ್ಲಿ ಇಷ್ಟರ ಮಟ್ಟಿಗೆ ಜನ ಸೇರಲು ಕಾರಣ ನೀವೇ, ನಿಮ್ಮ ರಾಜ್ಯದಿಂದಲೇ ಹೆಚ್ಚಿನ ಜನ ಹರಿದುಬಂದು ಈ ರೀತಿಯ ಸಮಸ್ಯೆ ನಿರ್ಮಾಣವಾಗಿದೆ ಎಂದು ಕಿಡಿಕಾರಿದ್ದಾರೆ.

banner

ಎಕ್ಸ್ ಬಳಕೆದಾರರೊಬ್ಬರು ಕನ್ನಡಿಗರು ದೇವಾಲಯದ ವಿರುದ್ಧ ದೂರುತ್ತಿರುವ ವಿಡಿಯೊವನ್ನು ಶೇರ್ ಮಾಡಿ ತಮ್ಮ ಮನೆ ದೇವರ ದೇವಾಲಯಗಳಿಗೆ ಭೇಟಿ ನೀಡದ ಕನ್ನಡಿಗರು ಆನ್‌ಲೈನ್‌ನಲ್ಲಿ ವೈರಲ್ ಆದ ದೇವಾಲಯಗಳಿಗೆ ಭೇಟಿ ನೀಡುವ ಶೋಕಿ ಮಾಡುವುದನ್ನು ಬಿಡಬೇಕು ಎಂದು ಬರೆದುಕೊಂಡಿದ್ದಾರೆ. ಮತ್ತೋರ್ವ ವ್ಯಕ್ತಿ ಕನ್ನಡಿಗರು ದೂರುವ ಮುನ್ನ ಕೇರಳದ ನಿಯಮವನ್ನು ಅನುಸರಿಸುವುದನ್ನು ಕಲಿಯಿರಿ. ಶಿಸ್ತಿನಿಂದ ಸರತಿ ಸಾಲಿನಲ್ಲಿ ನಿಲ್ಲದೇ ತಳ್ಳಾಟ ಮಾಡುತ್ತೀರ, ರಸ್ತೆಗಳಲ್ಲಿ ಅನಗತ್ಯವಾಗಿ ಓವರ್‌ ಟೇಕ್ ಮಾಡುತ್ತೀರ ಇದನ್ನೆಲ್ಲ ಬಿಟ್ಟು ಸರಿಯಾಗಿ ನಡೆದುಕೊಳ್ಳಿ ಎಂದು ಪಾಠ ಮಾಡಿದ್ದಾರೆ.

You may also like