ಪುತ್ತೂರು: ನಳ್ಳಿ ನೀರು ಸರಬರಾಜಿನ ವಿಚಾರದಲ್ಲಿ ಹಲ್ಲೆ ನಡೆದ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಶಾಂತಿಗೋಡು ಗ್ರಾಮದ ಉಮೇಶ್ ಕಂಡಿಗ ಅವರು ದೂರುದಾರರು. ನರಿಮೊಗರು ಪಂಚಾಯತ್ನಿಂದ ನಳ್ಳಿ ನೀರಿನ ಸೌಲಭ್ಯ ಇವರಿಗಿದ್ದು, ಮನೆಗೆ ನೀರು ಸರಬರಾಜು ಆಗದಿದ್ದರಿಂದ ಪಂಚಾಯತ್ನಿಂದ ನೀರು ಬಿಡುವ ಕೆಲಸದವರಾದ ಶೇಖರ ಎಂಬವರಿಗೆ ಕರೆ ಮಾಡಿ ನೀರು ಬಿಡಲು ತಿಳಿಸಿದ್ದರು.
ಎ.26 ರಂದು ಉಮೇಶ್ ಅವರು ಮನೆಯಲ್ಲಿದ್ದ ವೇಳೆ ಆರೋಪಿಗಳಾದ ಶೇಖರ ಮತ್ತು ಅವರ ಮಗ ತಿಲಕ್ ಇನ್ನೋರ್ವ ವ್ಯಕ್ತಿ ಮನೆಯ ಬಳಿ ಬಂದು ಉಮೇಶ್ ಅವರೊಂದಿಗೆ ನಳ್ಳಿ ನೀರಿನ ವಿಷಯಕ್ಕೆ ಮಾತು ಬೆಳೆಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿರುವ ಘಟನೆಯನ್ನು ನೋಡಿದ ಉಮೇಶ್ ಅವರ ಪತ್ನಿ ಮತ್ತು ಮಗಳು ಬಂದು ನೋಡಿ ಜಗಳವನ್ನು ಬಿಡಿಸಲು ಬಂದಾಗ ಆರೋಪಿಗಳು ಅವರಿಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.
ಹಲ್ಲೆಗೊಂಡ ಉಮೇಶ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

