Home » West Bengal : ರಾಷ್ಟ್ರಪತಿಗಳೆಗೆ ನೀರಿಲ್ಲದ ವಾಶ್ ರೂಮ್ ಕೊಟ್ಟ ಮಮತಾ ಸರ್ಕಾರ !!

West Bengal : ರಾಷ್ಟ್ರಪತಿಗಳೆಗೆ ನೀರಿಲ್ಲದ ವಾಶ್ ರೂಮ್ ಕೊಟ್ಟ ಮಮತಾ ಸರ್ಕಾರ !!

0 comments

West Bengal : ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ವಾಗತದ ವೇಳೆ ಪಶ್ಚಿಮ ಬಂಗಾಳ ಸರ್ಕಾರವು ಶಿಷ್ಟಾಚಾರ ಉಲ್ಲಂಘನೆ ಮಾಡಿದೆ ಎಂಬ ಆರೋಪದ ಬೆನ್ನಲ್ಲೇ, ರಾಷ್ಟ್ರಪತಿಗಳಿಗೆ ನೀಡಿದ್ದ ಶೌಚಾಲಯದಲ್ಲಿ ಸೂಕ್ತ ನೀರಿನ ವ್ಯವಸ್ಥೆ ಮಾಡಿರಲಿಲ್ಲ, ಜೊತೆಗೆ ಕಸ ತುಂಬಿದ ರಸ್ತೆಯಲ್ಲಿ ಅವರನ್ನು ಕರೆದೊಯ್ಯಲಾಗಿತ್ತು ಎಂಬ ಆಪಾದನೆಯೂ ಕೇಳಿಬಂದಿದೆ.

ಮಾರ್ಗಸೂಚಿಗಳ ಪ್ರಕಾರ ಹಲವು ಹಂತಗಳಲ್ಲಿ ಶಿಷ್ಟಾಚಾರ ಉಲ್ಲಂಘನೆ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವಾಲಯ, ಘಟನೆಗೆ ಸಂಬಂಧಿಸಿದಂತೆ ಸಮಗ್ರ ವರದಿ ನೀಡುವಂತೆ ಬಂಗಾಳದ ಮುಖ್ಯ ಕಾರ್ಯದರ್ಶಿಗೆ ಖಡಕ್ ಸೂಚನೆ ನೀಡಿದೆ. ಅವುಗಳಲ್ಲಿ ಅಧ್ಯಕ್ಷೀಯ ಶಿಷ್ಟಾಚಾರದ ಅನುಸರಣೆ, ಕಾರ್ಯಕ್ರಮದ ಸ್ಥಳದಲ್ಲಿ ಮಾಡಲಾದ ವ್ಯವಸ್ಥೆಗಳು, ರಾಷ್ಟ್ರಪತಿಯವರ ವಾಹನ ಪಥಸಂಚಲನದ ಮಾರ್ಗ ಮತ್ತು ಭದ್ರತೆ ಸೇರಿದಂತೆ ಇತರ ಸೌಲಭ್ಯಗಳ ಕುರಿತು ವಿವರಗಳನ್ನು ನೀಡುವಂತೆ ಕೇಳಲಾಗಿದೆ. 

ಪ್ರಧಾನಿ ಮೋದಿ, ‘ದೇಶಾದ್ಯಂತ ಮಹಿಳಾ ದಿನ ಆಚರಿಸುತ್ತಿರುವಾಗ, ಬಂಗಾಳದ ಟಿಎಂಸಿ ಸರ್ಕಾರ ರಾಷ್ಟ್ರಪತಿಗಳನ್ನು ಅವಮಾನಿಸಿದ್ದು ಕಳವಳಕಾರಿ. ಒಬ್ಬ ಬುಡಕಟ್ಟು ಮಹಿಳೆಯನ್ನು, ರಾಷ್ಟ್ರಪತಿಗಳನ್ನು ಅವಮಾನಿಸಿದ್ದಕ್ಕಾಗಿ ರಾಜ್ಯದ ಪ್ರಬುದ್ಧ ಜನರು ಟಿಎಂಸಿಯನ್ನು ಎಂದಿಗೂ ಕ್ಷಮಿಸುವುದಿಲ್ಲ’ ಎಂದಿದ್ದಾರೆ.

ಇದರ ನಡುವೆಯೇ ಕೇಂದ್ರದ ಆರೋಪಕ್ಕೆ ತಿರುಗೇಟು ನೀಡಿರುವ ಪಶ್ಚಿಮ ಬಂಗಾಳ ಸಿಎಂ, ‘2024ರ ಭಾರತ ರತ್ನ ಪ್ರಧಾನ ವೇಳೆ ರಾಷ್ಟ್ರಪತಿ ನಿಂತಿರುವಾಗ ಪ್ರಧಾನಿ ಮೋದಿ ಕುಳಿತೇ ಇದ್ದ ಫೋಟೋ ಟ್ವೀಟ್‌ ಮಾಡುವ ಮೂಲಕ ರಾಷ್ಟ್ರಪತಿಗೆ ಅವಮಾನ ಮಾಡುವುದು ಪ್ರಧಾನಿ ಮೋದಿಯೇ ಹೊರತೂ ತಾವಲ್ಲ ಎಂದಿದ್ದಾರೆ.

banner

ಟಿಎಂಸಿ ಆರೋಪವೇನು?

ಈ ವಿವಾದಕ್ಕೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಲಿಗುರಿಯಲ್ಲಿ ನಡೆದ ಕಾರ್ಯಕ್ರಮವು ಸರ್ಕಾರದ ಅಧಿಕೃತ ಕಾರ್ಯಕ್ರಮವಾಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅವರ ಪ್ರಕಾರ, ಅಂತರರಾಷ್ಟ್ರೀಯ ಸಂತಲ್ ಕೌನ್ಸಿಲ್ ಎಂಬ ಖಾಸಗಿ ಸಂಸ್ಥೆ ಆಯೋಜಿಸಿದ್ದ “ಅಂತರರಾಷ್ಟ್ರೀಯ ಬುಡಕಟ್ಟು ಸಂತಲ್ ಸಮ್ಮೇಳನ” ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳನ್ನು ಆಹ್ವಾನಿಸಲಾಗಿತ್ತು.

You may also like