Home » ಉಳ್ಳಾಲ ಮಸೀದಿ ಬಳಿ ಬಾಂಬ್‌ ಸ್ಫೋಟಿಸುತ್ತೇನೆ ಎಂದು ಪೋಸ್ಟ್‌ ಹಾಕಿದ್ದ ವ್ಯಕ್ತಿ ಭಟ್ಕಳದಲ್ಲಿ ಬಂಧನ

ಉಳ್ಳಾಲ ಮಸೀದಿ ಬಳಿ ಬಾಂಬ್‌ ಸ್ಫೋಟಿಸುತ್ತೇನೆ ಎಂದು ಪೋಸ್ಟ್‌ ಹಾಕಿದ್ದ ವ್ಯಕ್ತಿ ಭಟ್ಕಳದಲ್ಲಿ ಬಂಧನ

0 comments

ಉಳ್ಳಾಲ: ಉಳ್ಳಾಲದ ಮಸೀದಿ ಬಳಿ ಬಾಂಬ್‌ ಸ್ಫೋಟ ಮಾಡುತ್ತೇನೆಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ರವಾನೆ ಮಾಡಿದ್ದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ಬಂಧನ ಮಾಡಿದ್ದಾರೆ.

ಉತ್ತರ ಕನ್ನಡದ ಭಟ್ಕಳ ದೇವಿನಗರ, ಜಾಲಿ ನಿವಾಸಿ ಶಂಕರ್‌ ಮಾಸ್ತಪ್ಪ ಮೊಗೇರ್‌ (35) ಬಂಧಿತ ಆರೋಪಿ.

ಬಜ್ಪೆಯಲ್ಲಿ ಕಳೆದ ವರ್ಷ ಹ*ತ್ಯೆಗೀಡಾಗಿದ್ದ ಸುಹಾಸ್‌ ಶೆಟ್ಟಿ ಭಾವಚಿತ್ರವುಳ್ಳ ಇನ್ಸ್ಟಾಪೋಸ್ಟ್‌ ವೊಂದರಲ್ಲಿ ಆರೋಪಿ ಶಂಕರ್‌ ಎನ್ನುವವನು ತನ್ನ ಇನ್ಸ್ಟಾ ಖಾತೆಯಿಂದ “ಸಪೋರ್ಟ್‌ ಮಾಡಿ ಬ್ರೋ ಉಳ್ಳಾಲ ಮಸೀದಿ ಹತ್ರ ಬಾಂಬ್‌ ಬ್ಲಾಸ್ಟ್‌ ಮಾಡ್ತೀನಿʼ ಎಂಬ ಪ್ರಚೋದನಕಾರಿ ಸಂದೇಶವನ್ನು ಹಾಕಿದ್ದ.

ಈ ಸಂದೇಶವು ವೈರಲ್‌ ಆಗುತ್ತಿದ್ದಂತೆಯೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಳ್ಳಾಲ ಪೊಲೀಸರು ಕಿಡಿಗೇಡಿ ವಿರುದ್ಧ ಸೋಮವಾರ ಸುಮೊಟೋ ಪ್ರಕರಣ ದಾಖಲು ಮಾಡಿದ್ದರು. ಧರ್ಮಗಳ ನಡುವೆ ದ್ವೇಷ ಬಿತ್ತಿದ ಕಿಡಿಗೇಡಿಯನ್ನು ಶೀಘ್ರವೇ ಬಂಧನ ಮಾಡುವಂತೆ ನಗರ ಪೊಲೀಸ್‌ ಆಯುಕ್ತರನ್ನು ಆಗ್ರಹ ಮಾಡಿದ್ದರು.

banner

You may also like