ಪಂಚಾಯತ್ ಅನುದಾನದಲ್ಲಿ ಶೇ.25 ಅನುದಾನ ಸಹಾಯಧನ ಮಂಜೂರು ಮಾಡಲು ಮನವಿ

ಪಂಚಾಯತ್ ಅನುದಾನದಲ್ಲಿ ಶೇ.25 ರ ಅನುದಾನದ ಅಡಿಯಲ್ಲಿ ಸಹಾಯಧನವನ್ನು ಮಂಜೂರು ಮಾಡುವ ಕುರಿತು ಆಲೆಟ್ಟಿ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾದ ಸೃಜನ್ ಲೋಕೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಬೆಳ್ತಂಗಡಿ ಶಾಖೆಯ ಮುಖಂಡರಾದ ನಾಗರಾಜ್ ಎಸ್ ಬೆಳ್ತಂಗಡಿ , ಅಂಬೇಡ್ಕರ ಆಪತ್ಬಾಂಧವ ಟ್ರಸ್ಟ್ ಪುತ್ತೂರು ತಾಲೂಕು ಅಧ್ಯಕ್ಷರಾದ ಹೇಮಂತ್ ಅರ್ಲಪದವು, ಸದಸ್ಯರಾದ ಹರೀಶ್ ವಲತಡ್ಕ, ಕರ್ನಾಟಕ ರಾಜ್ಯ ಬೈರ ನಿರ್ಮಾಣ ವೇದಿಕೆ ಮುಖ್ಯಸ್ಥರಾದ ಹರೀಶ್ ಬೆಟ್ಟಂಪಾಡಿ , ರಮೇಶ್ ವಲತಡ್ಕ, ಚನ್ನಪ್ಪ ವಲತಡ್ಕ, ಲೀಲವತಿ ಹೇಮಂತ್ , ಉಮೇಶ್ ಬೆಟ್ಟಂಪಾಡಿ, ಚನ್ನಪ್ಪ ವಲತಡ್ಕ , ಹಾಗೂ ಆಲೆಟ್ಟಿ ಗ್ರಾಮ ಪಂಚಾಯತ್ 5ನೇ ವಾರ್ಡಿನ ಸದಸ್ಯರಾದ ಶ್ರೀಮತಿ ವೀಣಾ ವಸಂತ ಉಪಸ್ಥಿತರಿದ್ದರು.

Leave A Reply

Your email address will not be published.