C T Ravi: ಚಿಕ್ಕಮಗಳೂರಿನ ಮನೆ ಮನೆಗೆ ತೆರಳಿ ಸಿ. ಟಿ ರವಿ ಅವರಿಂದ ಭಿಕ್ಷಾಟನೆ !!

C T Ravi: ದತ್ತ ಮಾಲಧಾರಿಯಾಗಿರುವ ಚಿಕ್ಕಮಗಳೂರಿನ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಸಿ.ಟಿ ರವಿ(C T Ravi) ಅವರು ಇದೀಗ ಚಿಕ್ಕಮಗಳೂರಿನ ಎಲ್ಲ ಮನೆಮನೆಗೆ ಭಿಕ್ಷಾಟನೆಯನ್ನು ನಡೆಸುತ್ತಿದ್ದಾರೆ.

ಹೌದು, ಚಿಕ್ಕಮಗಳೂರಿನಲ್ಲಿ(Chikkamagaluru) ಇದೀಗ ದತ್ತ ಜಯಂತಿ ಸಂಭ್ರಮ. ಇದರ ಅದ್ಧಾರಿ ಆಚರಣೆಗೆ ಇಡೀ ಕಾಫಿನಾಡು ಕೇಸರಿಮಯವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಾವಿರಾರು ಭಕ್ತರು ದತ್ತ ಮಾಲೆಯನ್ನು ಧರಿಸಿದ್ದಾರೆ. ಅಂತೆಯೇ ಪ್ರತೀ ವರ್ಷದಂತೆ ಈಸಲವೂ ಸಿ. ಟಿ ರವಿ ಅವರು ದತ್ತಮಾಲೆ ಧರಿಸಿದ್ದು ಮನೆ-ಮನೆಗೆ ತೆರಳಿ ಸಿ.ಟಿ.ರವಿ ಪಡಿ ಸಂಗ್ರಹಿಸಿದ್ದಾರೆ.

ಅಂದಹಾಗೆ ದತ್ತಮಾಲಾಧಾರಿ ಸಿ.ಟಿ.ರವಿ ಅವರು ಚಿಕ್ಕಮಗಳೂರು ನಗರದ ನಾರಾಯಣಪುರದಲ್ಲಿ ಪಡಿ ಸಂಗ್ರಹಿಸುತ್ತಿದ್ದು, ಅವರಿಗೆ ಸುಮಾರು 20ಕ್ಕೂ ಹೆಚ್ಚು ಮಾಲಾಧಾರಿಗಳು ಸಾಥ್ ನೀಡಿದ್ದಾರೆ. 9 ಮನೆಯಲ್ಲಿ ಭಿಕ್ಷೆ ಬೇಡಿ ಪಡಿ ಸಂಗ್ರಹಿಸಿದ ಸಿ.ಟಿ.ರವಿ, ಆ ಪಡಿ ಸಂಗ್ರಹ ವಸ್ತುಗಳನ್ನ ಇರುಮುಡಿ ರೂಪದಲ್ಲಿ ನಾಳೆ ದತ್ತಪೀಠಕ್ಕೆ ಹೊತ್ತೊಯ್ಯುತ್ತಾರೆ.

ಇದನ್ನು ಓದಿ: Neel Nanda Dies: 32ರ ಯೌವ್ವನದಲ್ಲೇ ಚಿರ ನಿದ್ರೆಗೆ ಜಾರಿದ ಖ್ಯಾತ ಸ್ಟಾಂಡ್-ಅಪ್ ಕಾಮಿಡಿಯನ್ !!

Leave A Reply

Your email address will not be published.