ಡಿಕೆ ಶಿವಕುಮಾರ್ ಅವರು ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ಜೂನ್ 3 ಸಂಜೆ 4.5ಕ್ಕೆ ಲೋಕಭವನದ ಗಾಜಿನಮನೆಯಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ನಡುವ ಡಿಕೆ ಶಿವಕುಮಾರ್ ಅವರ ಕುರಿತಾದ ಅನೇಕ ಇಂಟರೆಸ್ಟಿಂಗ್ ವಿಚಾರಗಳು ಹೊರ ಬರುತ್ತಿವೆ. ಅಂತೆಯೇ ಇದೀಗ ಡಿಕೆ ಶಿವಕುಮಾರ್ ಅವರ ಮಗಳು ಐಶ್ವರ್ಯ ‘ನಮ್ಮಪ್ಪ ಯಾಕೆ ಸಿಎಂ ಆಗಬೇಕು?’ ಎಂದು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.


ಈ ಹಿಂದೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಐಶ್ವರ್ಯಾ ಅವರು ತಮ್ಮ ತಂದೆ ಡಿಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡಿದ್ದಾರೆ. ಇದು ಹಳೆಯ ವಿಡಿಯೋ ವಾಗಿದ್ದು ಡಿಕೆ ಶಿವಕುಮಾರ್ ಅವರು ಸಿಎಂ ಆಗಿರುವ ಹೊತ್ತಿನಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ” ನನ್ನ ತಂದೆ ಸುಮ್ಮನೆ ಎಲ್ಲೋ ಒಂದು ಸಿಎಂ ಆಗಬೇಕು ಎಂದು ನಾನು ಹೇಳುತ್ತಿಲ್ಲ. ಪಕ್ಷಕ್ಕಾಗಿ, ಜನರಿಗಾಗಿ ಅವರು ಪಟ್ಟಿರುವ ಕಷ್ಟಕ್ಕೆ, ಅವರ ಫ್ಯಾಮಿಲಿ ಮಾಡಿರುವ ತ್ಯಾಗಕ್ಕೆ ಆ ಸ್ಥಾನ ಸಿಗಬೇಕು ” ಎಂದಿದ್ದಾರೆ. ಅಲ್ಲದೆ ನಮ್ಮ ಅಪ್ಪ ಜೈಲಿನಂದ ಹೊರ ಬಂದಾಗ ನಾನು 2 ದಿನ ಅವರ ಜತೆ ಮಾತನಾಡಿರಲಿಲ್ಲ. ಅದಕ್ಕೆ ಕಾರಣ, ಹೊರಬಂದಾಗ ಮೊದಲು ನಮ್ಮ ಕುಟುಂಬವನ್ನು ನೋಡಲು ಬರಲಿಲ್ಲ. ಜನರನ್ನು ನೋಡಬೇಕು ಎಂದು ಹೋದರು. ಇದಕ್ಕೋಸ್ಕರವಾದರೂ ಒಂದು ದಿನ ನನ್ನ ತಂದೆ ರಾಜ್ಯದ ಮುಖ್ಯಮಂತ್ರಿ ಆಗಬೇಕು, ಆಗುತ್ತಾರೆ ಎಂಬ ಭಾವನೆ ಇಟ್ಟುಕೊಂಡು ಜೀವನ ಮಾಡುತ್ತಿದ್ದೇವೆ. ಹಲವು ವರ್ಷಗಳಿಂದ ನಮ್ಮಪ್ಪ ಯಾವತ್ತೂ ಒಂದು ಮೋಜಿನ ಪ್ರವಾಸ ಹೋಗಿಲ್ಲ. ಕುಟುಂಬವನ್ನೂ ಕರೆದುಕೊಂಡು ಹೋಗಿಲ್ಲ” ಎಂದು ವಿವರಿಸಿದ್ದಾರೆ.
ಇದರೊಂದಿಗೆ “ನನಗೋಸ್ಕರ ಎಷ್ಟೋ ಜನ ಚಪ್ಪಲಿಯನ್ನೂ ಹಾಕಿಕೊಳ್ಳದೇ ಟ್ರೈನ್ ಹತ್ತಿಕೊಂಡು ದೆಹಲಿಯ ಜೈಲಿನ ಬಳಿ ಬಂದಿದ್ದಾರೆ. ಎಷ್ಟೋ ದಿನ ಊಟ ಇಲ್ಲದೇ ಜೈಲಿನಿಂದ ಆಚೆ ನಿಂತು ಕಾದಿದ್ದಾರೆ. ಅವರಿಗೋಸ್ಕರ ನಾನು ಹೋಗದೇ, ನನ್ನ ಕುಟುಂಬ ನೋಡಬೇಕು ಎಂದು ಹೇಗೆ ಓಡಿಬರಲಿ ಹೇಳು? ಎಂದು ನನಗೆ ಕೇಳಿದರು. ಆಗ ನನಗೆ ಅವರಿಗೆ ಜನರ ಮೇಲಿನ ಪ್ರೀತಿ ಅರ್ಥ ಆಯಿತು ” ಎಂದು ಐಶ್ವರ್ಯಾ ನುಡಿದಿದ್ದಾರೆ.
ಅಲ್ಲದೇ ಇದೀಗ ಅವರು ಇಂಸ್ಟಗ್ರಾಂನಲ್ಲಿ ತಂದೆಯ ಕುರಿತು ಭಾವನಾತ್ಮಕವಾದ ವಿಡಿಯೋ ಒಂದನ್ನು ಎಡಿಟ್ ಮಾಡಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಕೆಜಿಎಫ್ ಮೂವಿಯ ಸಾಂಗ್ ಅನ್ನು ಎಡಿಟ್ ಮಾಡಿ, ನಡೆವೆ ತಮ್ಮ ಮಾತುಗಳ ಬೈಟ್ಗಳನ್ನು ಸೇರಿಸಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

